ಕಡಿರುದ್ಯಾವರ ಪರಿಸರದಲ್ಲಿ ಕಾಡಾನೆಯಿಂದ ಕೃಷಿಗೆ ದಾಳಿ

0

ಕಡಿರುದ್ಯಾವರ: ಗ್ರಾಮದ ಬೊಳ್ಳುರು ಬೈಲ್, ಹಿರ್ತೆಲಾಲ್, ಅಂತರ, ಮಂಜಲ್ ದಡ್ಡು, ಡೆಮ್ಮಜಾಲ್, ಅರ್ಬಿ, ಪೊಸಮಾರ್, ಪೊಡುoಬ, ಮಿತ್ತೆಲಾಲ್ ಎಂಬ ಅನೇಕ ಪ್ರದೇಶಗಳಲ್ಲಿ ಜು.20ರಂದು ರಾತ್ರಿ ಒಂಟಿ ಸಲಗವೊಂದು ದಾಳಿ ಮಾಡಿ ತೆಂಗು, ಅಡಿಕೆ, ಬಾಳೆ, ಹಲಸಿನ ಹಣ್ಣು ಗಳನ್ನು ನಾಶ ಮಾಡಿರುವ ಘಟನೆ ನಡೆದಿದೆ.

ಸಾರ್ವಜನಿಕರು ಭಯಭೀತರಾಗಿದ್ದು ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು ವನಿತಾ ಮೋನಪ್ಪ ಸಾಲಿಯಾನ್ ರವರು ಸೂಕ್ತ ಕ್ರಮಕ್ಕೆ ಅಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here