ಗೇರುಕಟ್ಟೆ: ಹಿರಿಯರಾದ ಹಾಮದ್ ಕುಂಇೆ ನಿಧನ

0

ಗೇರುಕಟ್ಟೆ : ಕೊರಂಜ ಮನೆ ಹಿರಿಯ ವ್ಯಕ್ತಿ ಪರಪ್ಪು ಜಮಾಅತ್ ನ ಸದಸ್ಯರು, ಸರಳ ಶ್ರಮಜೀವಿ ಆಗಿದ್ದ ಕೊರಂಜ ಹಾಮದ್ ಕುಂಞಿ (80 ವರ್ಷ) ಮೇ 31ರಂದು ಅಲ್ಪಕಾಲದ ಅನಾರೋಗ್ಯದಿಂದ ರಾತ್ರಿ ನಿಧನ ರಾದರು.

ಮೃತರು ಓರ್ವ ಪುತ್ರ ದ.ಕ .ಜಿಲ್ಲಾ ಆರೋಗ್ಯ ರಕ್ಷಾ ಸಮಿತಿ ಸದಸ್ಯ ಅಬ್ದುಲ್ ಕರೀಮ್ ಗೇರುಕಟ್ಟೆ ಸೇರಿದಂತೆ 2 ಗಂಡು 3 ಹೆಣ್ಣು ಮಕ್ಕಳು ಮತ್ತು ಅಪಾರ ಬಂಧು ಒಳಗವನ್ನು ಅಗಲಿದ್ದಾರೆ.

ಮೃತರಿಗೆ ಕರ್ನಾಟಕ ಸರಕಾರ ಸ್ಪೀಕರ್ ಯು.ಟಿ.ಖಾದರ್, ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಹಿದಾಯತ್ತುಲ್ಲ ಕೆ.ಎ, ರಕ್ಷಿತ್ ಶಿವರಾಮ್,ಮನ್ ಶರ್ ತಂಙಳ್ ಹಾಗೂ ಪರಪ್ಪು ಮಸೀದಿ ಆಡಳಿತ ಸಮಿತಿ ಸದಸ್ಯರು, ಸ್ಥಳೀಯ ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆ ಪದಾಧಿಕಾರಿಗಳು ಮೃತರಿಗೆ ಅಂತಿಮ ನಮನ ಸಲ್ಲಿಸಿದರು.

LEAVE A REPLY

Please enter your comment!
Please enter your name here