ಬೆಳ್ತಂಗಡಿ: ತಾಲೂಕು ಮರಾಟಿ ಸಮಾಜ ಸೇವಾ ಸಂಘದ ವತಿಯಿಂದ ಸಂಘದ ಕೋಶಾಧಿಕಾರಿಯಾಗಿದ್ದ ದಿ.ಪ್ರಜ್ವಲ್ ನಾಯ್ಕ ರವರಿಗೆ ನುಡಿನಮನ

0

ಬೆಳ್ತಂಗಡಿ: ತಾಲೂಕು ಮರಾಟಿ ಸಮಾಜ ಸೇವಾ ಸಂಘ ಇದರ ವತಿಯಿಂದ ಮೇ 26ರಂದು ಗುರುವಾಯನಕೆರೆ ನಾಗರಿಕ ಸೇವಾ ಟ್ರಸ್ಟ್ ಇದರ ಸಭಾ೦ಗಣದಲ್ಲಿ ಸಂಘದ ಅಧ್ಯಕ್ಷ ಉಮೇಶ್ ನಾಯ್ಕ ರವರ ಅಧ್ಯಕ್ಷತೆಯಲ್ಲಿ ಸಂಘದ ಕೋಶಾಧಿಕಾರಿಯಾಗಿದ್ದ ದಿವಂಗತ ಪ್ರಜ್ವಲ್ ನಾಯ್ಕ ರವರಿಗೆ ನುಡಿನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ನುಡಿ ನಮನ ಕಾರ್ಯಕ್ರಮದಲ್ಲಿ ತಾಲೂಕು ಸಂಘದ ಪದಾಧಿಕಾರಿಗಳು ಮತ್ತು ಪ್ರಜ್ವಲ್ ರವರ ಕುಟುಂಬದ ಸದಸ್ಯರು ಹಾಜರಿದ್ದು ಅವರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲೆಂದು ಪ್ರಾರ್ಥಿಸಲಾಯಿತು.

ತದನಂತರ ಕಾರ್ಯಕಾರಿ ಸಮಿತಿಯ ಮಾಸಿಕ ಸಭೆಯನ್ನು ನಡೆಸಲಾಯಿತು.

ಜೂ 9ರಂದು ನಡೆಯುವ ಸಂಘದ ಮಹಾಸಭೆಯಲ್ಲಿ ಜ.16ರಂದು ದಿವಂಗತರಾದ ಲಿಂಗಪ್ಪ ನಾಯ್ಕ ಬಡ ಕೋಡಿ ಮತ್ತು ಎ.17ರಂದು ದಿವಂಗತರಾದ ಪ್ರಜ್ವಲ್ ನಾಯ್ಕ ರವರಿಗೆ ಮರಣ ಸಾಂತ್ವಾನ ನಿಧಿ ರೂ 10,000/-ವನ್ನು ನೀಡುವುದೆಂದು ತೀರ್ಮಾನಿಸಲಾಯಿತು.

ಸುರೇಶ್ ಹೆಚ್.ಎಲ್ ಕಾರ್ಯಕ್ರಮ ನಿರೂಪಿಸಿ, ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here