ಅರಸಿನಮಕ್ಕಿ: ಪೆರ್ಲ ಬೂಡುದಮಕ್ಕಿ ಭುವನೇಶ್ವರಿ ಜ್ಞಾನ ವಿಕಾಸ ಕೇಂದ್ರದಲ್ಲಿ ಆಹಾರ ಸೇವನೆಯ ಬಗ್ಗೆ ಮಾಹಿತಿ ಕಾರ್ಯಗಾರ

0

ಅರಸಿನಮಕ್ಕಿ: ಪೆರ್ಲ ಬೂಡುದಮಕ್ಕಿ ಭುವನೇಶ್ವರಿ ಜ್ಞಾನ ವಿಕಾಸ ಕೇಂದ್ರದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಉಷಾ ರವರು ಮಾನಸಿಕ ಮತ್ತು ದೈಹಿಕ ಸಮಸ್ಸೆಗಳು, ದೈನಂದಿನ ಆರೋಗ್ಯಕರ ಅಭ್ಯಾಸಗಳು, ಯೋಗದಿಂದ ಆರೋಗ್ಯ ವಿಟಮಿನ್‌ಯುಕ್ತ ಆಹಾರ ಸೇವನೆಯ ಬಗ್ಗೆ ಮಾಹಿತಿ ನೀಡಿದರು.

ಎಸ್.ಡಿ.ಎಂ ವಿದ್ಯಾರ್ಥಿನಿಯರು ಮಹಿಳೆಯರ ಮುಟ್ಟಿನ ಕಪ್‌ನ ಬಗ್ಗೆ ಮಾಹಿತಿಯನ್ನು ನೀಡಿದರು.

ಜ್ಞಾನವಿಕಾಸ ಸಮನ್ವಯಾಧಿಕಾರಿಗಳು, ಕೇಂದ್ರದಲ್ಲಿ ಸಭೆಯನ್ನು ನಿರ್ವಹಣೆ ಮಾಡುವ ಕುರಿತು ಮಾಹಿತಿಯನ್ನು ನೀಡಿದರು.

ವಿ.ಎಲ್.ಇ ದಿವ್ಯರವರು ವಿಶ್ವಕರ್ಮ ಯೋಜನೆಯ ಬಗ್ಗೆ ಮಾಹಿತಿ ನೀಡಿದರು ಸೇವಾಪ್ರತಿನಿಧಿ ಅರುಣಾರವರು ವರದಿಯನ್ನು ವಾಚಿಸಿದರು.

ಸೀತಾ ಸ್ವಾಗತಿಸಿ, ಪದ್ಮಾವತಿಯವರು ಧನ್ಯವಾದವಿತ್ತರು.ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಕೊನೆಗೊಳಿಸಿದರು.

LEAVE A REPLY

Please enter your comment!
Please enter your name here