ಉಜಿರೆ ಓಡಲ ಶ್ರೀ ವ್ಯಾಘ್ರ ಚಾಮುಂಡಿ ದೈವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತಿ ಆಯ ವ್ಯಯ ಸಭೆ

0

ಉಜಿರೆ: ಶ್ರೀ ವ್ಯಾಘ್ರ ಚಾಮುಂಡಿ ದೈವಸ್ಥಾನದ ಪ್ರತಿಷ್ಠ ವರ್ಧಂತಿ ಉತ್ಸವದ ಖರ್ಚು ವೆಚ್ಚಗಳ ಸಭೆ ಮೇ 26ರಂದು ದೈವಸ್ಥಾನದ ವಠಾರದಲ್ಲಿ ಟ್ರಸ್ಟ್ ಅಧ್ಯಕ್ಷ ಸೀತಾರಾಮ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಟ್ರಸ್ಟಿನ ಕಾರ್ಯದರ್ಶಿ ಪರಮೇಶ್ವರ ಸ್ವಾಗತಿಸಿದರು. ಕೋಶಾಧಿಕಾರಿ ಸುರೇಶ ಆಚಾರ್ ಲೆಕ್ಕಪತ್ರ ಮಂಡಿಸಿದರು.

ಅಧ್ಯಕ್ಷರು ಶ್ರೀ ಸೀತಾರಾಮ್ ಶೆಟ್ಟಿ ಅವರು ಪ್ರಾಸ್ತಾವಿಕ ಮಾತನಾಡಿ ಕಾರ್ಯಕ್ರಮ ಯಶಸ್ವಿಗೆ ಎಲ್ಲಾ ಭಕ್ತರು ಕಾರಣ ಸಾನಿಧ್ಯದ ದೇವಿಯ ಕೆಲಸಕ್ಕೆ ಎಂದು ತಮ್ಮನ್ನು ತಾವು ತೊಡಗಿಸಿದ್ದಾರೆ ಆದ್ದರಿಂದ ಯಶಸ್ವಿಗೆ ಕಾರಣ ಎಮದು ಎಲ್ಲರಿಗೂ ಧನ್ಯವಾದಗಳು ಸಮರ್ಪಿಸಿದರು.

ಟ್ರಸ್ಟಿನ ಸದಸ್ಯರುಗಳಾದ ಶ್ರೀನಿವಾಸ ಗೌಡ, ಸುರೇಶ್ ಗೌಡ, ಪುಷ್ಪ ಶ್ರೀನಿವಾಸ್, ವಿಶಾಲಾಕ್ಷಿ, ಮಹಾನೀಯರಾದ ಜಯರಾಮ ಶೆಟ್ಟಿ ಕೆoಬರ್ಜೆ, ಅರವಿಂದ ಕಾರಂತ, ಸುವರ್ಣ, ಸುರೇಶ್ ಪೂಜಾರಿ, ಸಮಿತಿ ಸದಸ್ಯರು, ಊರವರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here