


ಬೆಳ್ತಂಗಡಿ: ಮಹಿಳಾ ದಿನಾಚರಣೆಯ ಪ್ರಯುಕ್ತ ಮಹಿಳೆಯರಿಗೆ ಜ್ಯೋತಿ ಆಸ್ಪತ್ರೆಯಲ್ಲಿ ಸ್ತನ ಕ್ಯಾನ್ಸರ್ ನ ಬಗ್ಗೆ ಮಾಹಿತಿ ಶಿಬಿರ ಹಾಗೂ ತಪಾಸಣೆ ಮಾ.8ರಂದು ನಡೆಯಿತು.
ಸಾಮಾನ್ಯ 75ರಿಂದ ಅಧಿಕ ಸದಸ್ಯರು ಹಾಜರಿದ್ದು ಶಿಬಿರದ ಸದುಪಯೋಗ ಪಡೆದುಕೊಂಡರು.ಕಾರ್ಯಕ್ರಮದಲ್ಲಿ ರಿತ ಅಬ್ರಹಾಂ ನವರು ಸ್ತನ ಕ್ಯಾನ್ಸರ್ ನಿಂದ ತಮಗಾದ ಅನುಭವವನ್ನು ಶಿಬಿರದಲ್ಲಿ ಹಂಚಿಕೊಂಡರು.

ಶಿಬಿರವನ್ನು ಜ್ಯೋತಿ ಆಸ್ಪತ್ರೆಯ ತಜ್ಞ ವೈದ್ಯರುಗಳಾದ ಡಾ.ಸಿಸ್ಟರ್ ಆನ್ ಗ್ರೇಸ್ ಹಾಗೂ ಡಾ.ಸಾಂದ್ರ ಮೊನಿಸ್ ರವರು ತಪಾಸಣೆ ನಡೆಸಿ ಸೂಕ್ತ ಮಾಹಿತಿಯನ್ನು ನೀಡಿದರು.
ಈ ಕಾರ್ಯಕ್ರಮದಲ್ಲಿ ಜ್ಯೋತಿ ಆಸ್ಪತ್ರೆಯ ಆಡಳಿತ ಅಧಿಕಾರಿ ಡಾ.ಸಿಸ್ಟರ್ ಮೇರಿಲೆಟ್, ಧರ್ಮ ಭಗಿನಿಯರು ಹಾಗೂ ಸಂಸ್ಥೆಯ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಜಾಗತಿಕ ಮಹಿಳಾ ದಿನಾಚರಣೆಯ ಪ್ರಯುಕ್ತ ಶಿಬಿರದಲ್ಲಿ ನೆರೆದಿದ್ದ ಮಹಿಳೆಯರಲ್ಲಿ ಒಬ್ಬ ಹಿರಿಯ ಮಹಿಳೆಗೆ ಜ್ಯೋತಿ ಆಸ್ಪತ್ರೆಯ ವತಿಯಿಂದ ಸನ್ಮಾನ ಮಾಡಲಾಯಿತು.

ಜ್ಯೋತಿ ಆಸ್ಪತ್ರೆಯ ಸಿಬ್ಬಂದಿ ವರ್ಗದವರಿಂದ ಕೇಶದಾನ ಹಾಗೂ ರಕ್ತದಾನ ಮಾಡಲಾಯಿತು.ಈ ಕಾರ್ಯಕ್ರಮವನ್ನು ಶಿಲ್ಪಾ ರವರು ನಿರೂಪಿಸಿ ಧನ್ಯವಾದವಿತ್ತರು.