ಬಿಎಂಎಸ್ ಜಿಲ್ಲಾ ಕಾರ್ಯಕಾರಿಣಿ ಸಭೆ

0

ಬೆಳ್ತಂಗಡಿ: ಭಾರತೀಯ ಮಜ್ದೂರು ಸಂಘದ ದ.ಕ. ಜಿಲ್ಲಾ ಘಟಕದ ಜಿಲ್ಲಾ ಕಾರ್ಯಕಾರಿಣಿ ಸಭೆ ಪ್ರಭಾಕರ ಘಾಟೆ ಸಭಾಂಗಣದಲ್ಲಿ ನಡೆಯಿತು.

ರಾಜ್ಯ ಬಿ.ಎಂ.ಎಸ್.ನ ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಹೆಚ್ ಎಲ್. ಅವರು ಮಾರ್ಚ್ 1,2 ಮತ್ತು 3ರಂದು ಬಳ್ಳಾರಿಯಲ್ಲಿ ನಡೆಯುವ ಭಾರತೀಯ ಮಾಜ್ದೂರು ಸಂಘ ಕರ್ನಾಟಕ ರಾಜ್ಯದ ತ್ರೈವಾರ್ಷಿಕ ಅಧಿವೇಶನದ ಪೋಸ್ಟರ್ ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡಿದ ಅವರು ರಾಷ್ಟ್ರೀಯತೆಯನ್ನು ಕಾರ್ಮಿಕ ವಲಯದಲ್ಲಿ ಮೂಡಿಸುತ್ತಾ ಕಾರ್ಮಿಕರ ಪರವಾಗಿ ಕೆಲಸ ಮಾಡುತ್ತಿರುವ ಸಂಘಟನೆ ನಮ್ಮದು. ಇದರ ರಾಜ್ಯ ಅಧಿವೇಶನಕ್ಕೆ ತಾವುಗಳು ಬರಬೇಕು. ಇದರ ಸದುಪಯೋಗವನ್ನು ಪಡೆಯಬೇಕು ಎಂದು ಆಹ್ವಾನಿಸಿದರು.

ರಾಜ್ಯ ಉಪಾಧ್ಯಕ್ಷ ಭಗವಾನ್ ದಾಸ್, ಕಾರ್ಯದರ್ಶಿ ಜಯರಾಜ್, ಜಿಲ್ಲಾಧ್ಯಕ್ಷರಾದ ವಕೀಲ ಅನಿಲ್ ಕುಮಾರ್ ಯು. ಬೆಳ್ತಂಗಡಿ, ಕಾರ್ಯದರ್ಶಿ ಗೋಪಾಲ ಕೃಷ್ಣ, ಹಿರಿಯ ಮುಖಂಡರಾದ ವಿಶ್ವನಾಥ್ ಶೆಟ್ಟಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here