ಬೆಳ್ತಂಗಡಿ ಮುಳಿಯ ಜುವೆಲ್ಸ್ ನಲ್ಲಿ ಕನ್ನಡ-ಬದುಕು ಬಂಗಾರ ಕಾರ್ಯಕ್ರಮ ಸಂಪನ್ನ

0

ಬೆಳ್ತಂಗಡಿ : ಮುಳಿಯ ಜುವೆಲ್ಸ್ ನಲ್ಲಿ ಕನ್ನಡ ಬದುಕು ಬಂಗಾರ ಕಾರ್ಯಕ್ರಮವು ಡಿ.2ರಂದು ನಡೆಯಿತು.ಈ ಕಾರ್ಯಕ್ರಮದ ಅತಿಥಿಗಳಾಗಿ ಪುಂಜಾಲಕಟ್ಟೆ ಪ.ಪೂ ಕಾಲೇಜಿನ ಪ್ರಾಂಶುಪಾಲರಾದ ಡಾ.ಟಿ.ಕೆ ಶರತ್ ಕುಮಾರ್ ಹಾಗೂ ಇನ್ನೊರ್ವ ಅತಿಥಿಗಳಾದ ಉಜಿರೆ ಶ್ರೀ .ಧ.ಮಂ.ಪ.ಪೂ ಕಾಲೇಜಿನ ಕನ್ನಡ ಉಪನ್ಯಾಸಕರು ಮಹಾವೀರ ಜೈನ್ ಇಚ್ಲಂಪಾಡಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ಬೆಳಾಲು ಎಸ್ ಡಿ ಎಮ್ ಹೈಸ್ಕೂಲ್ ನ ಮುಖ್ಯ ಶಿಕ್ಷಕ ರಾಮಕೃಷ್ಣ ಭಟ್ ಚೊಕ್ಕಾಡಿ, ಮುಂಡೂರು ಶಾಲೆ ಮುಖ್ಯ ಶಿಕ್ಷಕ ಕಲ್ಲೇಶಪ್ಪ ಕೆ ಬಿ, ಬಂದಾರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ ಪ್ರಶಾಂತ್ ಹಾಗೂ ಕಂಬಳ ಕ್ರೇತ್ರದಲ್ಲಿ ಸಾಧನೆಗೈದ ಬಂಗಾಡಿ ನಾರಾಯಣ ಮಲೆಕುಡಿಯ ಇವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಮಾರ್ಕೆಟಿಂಗ್ ಕನ್ಸ್ಟಲ್ಟೆಂಟ್ ವೇಣು ಶರ್ಮ ಉಪಸ್ಥಿತರಿದ್ದರು. ಹಾಗೂ ಅಶೋಕ್ ಬಂಗೇರ ಸ್ವಾಗತಿಸಿ, ಲೋಹಿತ್ ಕುಮಾರ್ ವಂದಿಸಿ, ಡೈಜಿವರ್ಲ್ಡ್ ನ ಲೋಹಿತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here