ಮಿತ್ತಬಾಗಿಲು: ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಗಣಪತಿ ಗುಡಿಯ ಸಮರ್ಪಣಾ ಕಾರ್ಯಕ್ರಮ, ಬೆಡಿಗುತ್ತು ಕುಟುಂಬಸ್ಥರಿಂದ ದೇಣಿಗೆ ಸಮರ್ಪಣೆ

0

ಮಿತ್ತಬಾಗಿಲು: ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಗಣಪತಿ ಗುಡಿಯ ಸಮರ್ಪಣಾ ಕಾರ್ಯಕ್ರಮ ಹಾಗೂ ಬೆಡಿಗುತ್ತು ಕುಟುಂಬಸ್ಥರಿಂದ ದೇಣಿಗೆ ಸಮರ್ಪಣೆ ನ.19 ರಂದು ನೆರವೇರಿತು.

ಗಣಪತಿಗುಡಿಯ ನಿರ್ಮಾಣದ ಸಂಪೂರ್ಣ ವೆಚ್ಚವನ್ನು ಮಿತ್ತಬಾಗಿಲು ಗ್ರಾಮದ ಬೆಡಿಗುತ್ತು ಮನೆತನದ ಹಿರಿಯರಾದ ರಾಮಣ್ಣಗೌಡ, ಸುಂದರಿ ಮತ್ತು ಮಕ್ಕಳು ವಹಿಸಿದ್ದು ಗಣಪತಿ ಗುಡಿಯ ಸಂಪೂರ್ಣ ನಿರ್ಮಾಣಕ್ಕೆ ಬೆಡಿಗುತ್ತು ಮನೆತನದ ಕುಟುಂಬಸ್ಥರು ದೇಣಿಗೆ ನೀಡಿದ್ದಾರೆ.

ಗಣಪತಿ ಗುಡಿಯ ಸಮರ್ಪಣೆ ಸಂದರ್ಭದಲ್ಲಿ ಬೆಡಿಗುತ್ತು ಮನೆತನದ ಕುಟುಂಬಸ್ಥರು ಹಾಜರಿದ್ದರು.

ನಂತರ ನಡೆದ ಸಭಾ ಕಾರ್ಯಕ್ರಮದ ಸಂದರ್ಭದಲ್ಲಿ ಬೆಡಿಗುತ್ತು ಮನೆತನದ ಪರವಾಗಿ ಈ ಹಿಂದೆ ಗಣಪತಿ ಗುಡಿಯ ನಿರ್ಮಾಣಕ್ಕೆ ರೂ.3 ಲಕ್ಷ ರೂಪಾಯಿ ನೀಡಿದ್ದು ಇವತ್ತು ಕೂಡ ರೂಪಾಯಿ 1,50,000 ವನ್ನು ಜೀರ್ಣೋದ್ಧಾರ ಚಟುವಟಿಕೆಗಳಿಗೆ ಪೂರಕವಾಗಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಲೋಕೇಶ್ ರಾವ್ ಕುದ್ರೋಳಿ ಇವರಿಗೆ ಚೆಕ್ ಮೂಲಕ ಹಸ್ತಾಂತರ ಮಾಡಿದರು.

ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಬಿ.ಕೆ ಧನಂಜಯ ರಾವ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಲೋಕೇಶ್ ರಾವ್ ಕುದ್ರೋಳಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಾಸುದೇವ ರಾವ್ ಕಕ್ಕಿನೇಜಿ ಹಾಗೂ ಸಮಿತಿಯ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಬೆಡಿಗುತ್ತು ಮನೆತನದ ಪರವಾಗಿ ಬಿ.ಎಮ್ ಗೌಡ ಉಜಿರೆ, ರಾಜೇಂದ್ರ ಗೌಡ ಬೆಡಿಗುತ್ತು, ಶಶಿಧರ ಬೆಡಿಗುತ್ತು, ಉಮೇಶ್ವರಿ ಬೆಡಿಗುತ್ತು ಉಪಸ್ಥಿತರಿದ್ದರು.

ಅಧ್ಯಕ್ಷ ಧನಂಜಯ ರಾವ್ ಅವರು ಧನ್ಯವಾದ ಸಲ್ಲಿಸಿದರು.

LEAVE A REPLY

Please enter your comment!
Please enter your name here