ನೆಲ್ಯಾಡಿಯಲ್ಲಿ ಸೀರೋ ಮಲಬಾರ್ ಯೂತ್ ಮೂವ್ಮೆಂಟ್ ಆರ್ಲ ದಿಂದ ಶಟಲ್ ಬಾಡ್ಮಿಂಟನ್ ಟೂರ್ನಮೆಂಟ್

0

ನೆಲ್ಯಾಡಿ: ಸೀರೋ ಮಲಬಾರ್ ಯೂತ್ ಮೂವ್ಮೆಂಟ್ ಸೆಂಟ್ ಮೆರೀಸ್ ಚರ್ಚ್ ಆರ್ಲ ಇದರ ನೇತೃತ್ವದಲ್ಲಿ ಹೊನಲು ಬೆಳಕಿನ ಶಟಲ್ ಬಾಡ್ಮಿಂಟನ್ ಪಂದ್ಯಾಟ ನ.4ರಂದು ನಡೆಸಲಾಯಿತು.

ಸುಮಾರು 36 ತಂಡಗಳು ಭಾಗವಹಿಸಿದ ಟೂರ್ನಿಯಲ್ಲಿ ನೆಲ್ಯಾಡಿ ಯ ವಿನೀತ್ ಮತ್ತುಕಲಿಲ್ ತಂಡಗಳು ಪ್ರಥಮ ಸ್ಥಾನ 10000/- ರೂಪಾಯಿ ನಗದು ಹಾಗೂ ಟ್ರೋಫಿ ಸುಶಾಂತ್ ಮತ್ತು ಉತ್ತಮ್ ಹಾಗೂ ದ್ವಿತೀಯ ಸ್ಥಾನವನ್ನು ರೂಪಾಯಿ 7000/- ಮತ್ತು ಟ್ರೋಫಿ ತೃತೀಯ ಸ್ಥಾನವನ್ನು ನೆಲ್ಸನ್ ಮತ್ತು ಲಿಸನ್ 5000/- ರೂಪಾಯಿ ಮತ್ತೂ ಟ್ರೋಫಿ ಪಡೆದರು.

ಉಪ್ಪಿನಂಗಡಿ ಠಾಣೆ ಉಪನಿರೀಕ್ಷಕರಾದ ಲಾರೆನ್ಸ್ ಪಾಲೇಲಿ ಪಂದ್ಯಾಟವನ್ನು ಉದ್ಘಾಟಿಸಿದರು.

ವೇದಿಕೆಯಲ್ಲಿ ಗೊಳಿತಟ್ಟು ಪಂಚಾಯತ್ ಸದಸ್ಯರಾದ ಜೋಸೆಫ್ ವಿ ಸಿ, ಆರ್ಲ ಸೆಂಟ್ ಮೇರಿಸ್ ಚರ್ಚ್ ಟ್ರಸ್ಟಿಗಳಾದ ಸೇಬಾಷ್ಟಿಯನ್, ಪ್ರಕಾಶ್, ರೋಬರ್ಟ್, ಮನು ಜೇಮ್ಸ್, ಎಸ್ ಎಂ ವೈ ಎಂ ಅಧ್ಯಕ್ಷರಾದ ಶ್ರೀಜಿತ್, ಉಪಾಧ್ಯಕ್ಷೆ ಅಂಕಿತಾ, ಜೇಮ್ಸ್ ಬಾಬು ರಾಜ್ ಉಪಸ್ಥಿತರಿದ್ದರು. ಜಿನೋ,ಶ್ರೀಜಿತ್, ಶೆಮಿಲ್,ಡಿವಿನ್ ಸಂಯೋಜಕರಾಗಿ ಕಾರ್ಯನಿರ್ವಹಿಸಿದ್ದರು.

ನೆಲ್ಯಾಡಿ-ಆರ್ಲ ಚರ್ಚ್ ಗಳ ಧರ್ಮ ಗುರುಗಳು, ಕೆ.ಎಸ್.ಎಂ.ಸಿ.ಎ ನಿರ್ದೇಶಕರು ಆದ ಫಾ.ಶಾಜಿ ಮಾತ್ಯು ಸಹಾಯಕ ಗುರುಗಳಾದ ಫಾ.ಬಿಪಿನ್ಎಸ್ ಎಂ ಎಮ್ ತಂಡಕ್ಕೆ ಅಗತ್ಯ ಪ್ರೋತ್ಸಾಹವನ್ನು ನೀಡಿದರು.

LEAVE A REPLY

Please enter your comment!
Please enter your name here