ಸುಲ್ಕೇರಿ: ಶ್ರೀ ನೇಮಿನಾಥ ಸ್ವಾಮಿ ಬಸದಿಯ ಜೀರ್ಣೋದ್ದಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರಾದ ಡಿಡಿಯ ವಿತರಣೆ

0

ಸುಲ್ಕೇರಿ: ಗುರುವಾಯನಕೆರೆ ಯೋಜನಾ ಕಚೇರಿ ವ್ಯಾಪ್ತಿಯ ಸುಲ್ಕೇರಿಯ ಶ್ರೀ ನೇಮಿನಾಥ ಸ್ವಾಮಿ ಬಸದಿಯ ಜೀರ್ಣೋದ್ದಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ ಪೂಜ್ಯರು ಮಂಜೂರು ಮಾಡಿರುವ ರೂ ಹತ್ತು ಲಕ್ಷ ಮೊತ್ತದ ಡಿಡಿಯ ವಿತರಣೆಯನ್ನು ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ಎಲ್.ಏಚ್ ಮಂಜುನಾಥ್ ರವರು ಸಮಿತಿಯ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು.

ಈ ಸಂಧರ್ಭದಲ್ಲಿ ಬಸದಿಯ ಜಿರ್ಣೊದ್ಧಾರ ಸಮಿತಿಯ ಪ್ರಮುಖರಾದ ಜಗದೀಶ್ ಹೆಗ್ಡೆ ನಾವರ ಗುತ್ತು, ಅಜಿತ್ ಜೈನ್ ಬೊನ್ನಿಜೆ, ಜನಜಾಗೃತಿ ನಾರಾವಿ ವಲಯಾಧ್ಯಕ್ಷರಾದ ನಿತ್ಯಾನಂದ ನಾವರ, ಉದ್ಯಮಿ ಸುಂದರ್ ಶೆಟ್ಟಿ ಸುಲ್ಕೇರಿ, ಯೋಜನಾಧಿಕಾರಿ ದಯಾನಂದ ಪೂಜಾರಿ, ವಲಯ ಮೇಲ್ವಿಚಾರಕರಾದ ದಮಯಂತಿ, ವಲಯದ ಸೇವಾಪ್ರತಿನಿಧಿಗಳು, ಊರ ಪ್ರಮುಖರು ಹಾಗೂ ಬಸದಿಗೆ ಸಂಭದಿಸಿದ ಜೈನ ಭಾಂಧವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here