ಮುಂಡಾಜೆ ಪ.ಪೂ.ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭ

0

ಮುಂಡಾಜೆ: ಮುಂಡಾಜೆ ಪದವಿ ಪೂರ್ವ ಕಾಲೇಜು (ಅನುದಾನಿತ), ಮುಂಡಾಜೆ ಇಲ್ಲಿನ ‘ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವು ಅ.12ರಿಂದ 18ರ ವರೆಗೆ ಸರಸ್ವತಿ ಆಂಗ್ಲ ಮಾಧ್ಯಮ ಶಾಲೆ, ಮುಂಡಾಜೆ ಇಲ್ಲಿ ಜರುಗಲಿದೆ.
ಇದರ ಉದ್ಘಾಟನಾ ಸಮಾರಂಭ ಅ.12ರಂದು ಉದ್ಘಾಟಕರಾಗಿ ಅನಂತ ಭಟ್ ಮಚ್ಚಿಮಲೆ ಅಧ್ಯಕ್ಷರು, ರೋಟರಿ ಕ್ಲಬ್, ಬೆಳ್ತಂಗಡಿ, ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಿನಯಚಂದ್ರ, ಅಧ್ಯಕ್ಷರು, ವಿವೇಕಾನಂದ ಶಿಕ್ಷಣ ಸಂಸ್ಥೆಗಳು, ಮುಂಡಾಜೆ ಇವರು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ವೆಂಕಟ್ರಮಣ ರಾವ್ ಮಂಕುಡೆ, ಸಂಚಾಲಕರು, ಸರಸ್ವತಿ ವಿದ್ಯಾಸಂಸ್ಥೆಗಳು, ಕಡಬ, ಅತಿಥಿಗಳಾಗಿ ಜಾಲಿ ಓ.ಎ., ಪ್ರಾಂಶುಪಾಲರು, ಮುಂಡಾಜೆ ಪದವಿಪೂರ್ವ ಕಾಲೇಜು,
ಗಾಯತ್ರಿ ಪಿ. ಪಿ.ಡಿ.ಓ. ಗ್ರಾಮ ಪಂಚಾಯತ್ ಮುಂಡಾಜೆ, ಶಿಬಿರ ಸಮಿತಿಯ ಅಧ್ಯಕ್ಷ ಬಾಬು ಪೂಜಾರಿ, ಕೂಳೂರು ಇವರು ವೇದಿಕೆಯಲ್ಲಿ ಆಸೀನರಾಗಿದ್ದರು.

ನಮಿತಾ ಕೆ.ಆರ್., ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಸ್ವಾಗತಿಸಿ, ಉಪನ್ಯಾಸಕಿ ವಸಂತಿ ನಿರ್ವಹಿಸಿ, ಸಹ ಕಾರ್ಯಕ್ರಮಾಧಿಕಾರಿ ಸಂದೀಪ್ ಐ ವಂದಿಸಿದರು.

LEAVE A REPLY

Please enter your comment!
Please enter your name here