ಬೆಳಾಲು: ಕುಂಡಡ್ಕ ಗ್ರಾಮ ಅರಣ್ಯ ಸಮಿತಿ ಮಹಾಸಭೆ

0

ಬೆಳಾಲು: ಬೆಳಾಲು ಕುಂಡಡ್ಕ ಗ್ರಾಮ ಅರಣ್ಯ ಸಮಿತಿ ಸುರುಳಿ ಇದರ ವಾರ್ಷಿಕ ಮಹಾಸಭೆ ಸೆ.30 ರಂದು ಸುರುಳಿ ಬೇರಿಕೆ ಅಂಗನವಾಡಿ ಕೇಂದ್ರದಲ್ಲಿ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಗಂಗಾಧರ ಗೌಡ ಎಸ್. ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ್ ಗೌಡ ಕಾರ್ಯಕ್ರಮ ಉದ್ಘಾಟಿಸಿದರು.ಮುಖ್ಯ ಅತಿಥಿಗಳಾಗಿ ಬೆಳಾಲು ಗ್ರಾಮ ಪಂಚಾಯತ್ ಸದಸ್ಯ ಸುರೇಂದ್ರ ಗೌಡ ಸುರುಳಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲಕ್ಷ್ಮೀ ಬಾಯಿ ಎಚ್., ಗ್ರಾಮಕರಣಿಕರು ಗೌತಮಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿ ಪ್ರಮೀಳಾ ಕೊಲ್ಪಾಡಿ, ಅರಣ್ಯ ಇಲಾಖೆಯ ಜೆರಾಲ್ಡ್ ಡಿಸೋಜ, ಅರಣ್ಯ ಸಮಿತಿಯ ಕಾರ್ಯದರ್ಶಿ ಎನ್. ಲೋಕೇಶ್, ಪ್ರತಿನಿಧಿ ಕರಿಯಣ್ಣ ಗೌಡ, ಅರಣ್ಯ ರಕ್ಷಕ ವಿನಯ ಚಂದ್ರ,ಸಂತೋಷ ಭಾಗವಹಿಸಿದ್ದರು.

ಉಷಾ, ಲೀಲಾವತಿ, ಲೋಕಮ್ಮ ಪ್ರಾರ್ಥಿಸಿದರು, ಉಮಾವತಿ ಸ್ವಾಗತಿಸಿ ಸತೀಶ್ ನಾಯ್ಕ ವಂದಿಸಿದರು.ಕರಿಯಣ್ಣ ಗೌಡ ನಿರೂಪಿಸಿದರು.ಇದೇ ಸಂದರ್ಭದಲ್ಲಿ ನೂತನ ಸಮಿತಿ ರಚಿಸಲಾಯಿತು.

LEAVE A REPLY

Please enter your comment!
Please enter your name here