ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನದ ವತಿಯಿಂದ ನಡ-ಕನ್ಯಾಡಿ ಗ್ರಾಮದ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ

0

ನಡ: ಸುರ್ಯ ಶ್ರೀಸದಾಶಿವರುದ್ರ ದೇವಸ್ಥಾನದ ವತಿಯಿಂದ ನಡ-ಕನ್ಯಾಡಿ ಗ್ರಾಮದ 8 ಅಂಗನವಾಡಿ ಕೇಂದ್ರ ಮತ್ತು ಸರಕಾರಿ ಕಿರಿಯ ಮತ್ತು ಹಿರಿಯ 2 ಶಾಲೆಗಳ ಒಟ್ಟು 274 ವಿದ್ಯಾರ್ಥಿಗಳಿಗೆ ಅನುವಂಶಿಕ ಆಡಳಿತ ಮೊಕ್ತೇಸರರಾದ ಶ್ರೀ ಡಾ.ಸತೀಶ್ಚಂದ್ರ ಸುರ್ಯಗುತ್ತು ಇವರು ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ಮಾಡಿದರು.

ಹಾಗೂ ಇದೇ ಸಂದರ್ಭದಲ್ಲಿ 30 ವಿದ್ಯಾರ್ಥಿಗಳಿಗೆ ಪೋತ್ಸಾಹಧನವನ್ನು ವಿತರಿಸಿದರು.

ಮುನಿರಾಜ ಅಜ್ರಿ ಸ್ವಾಗತಿಸಿ, ಪದ್ಮನಾಭ ಗೌಡ ವಂದಿಸಿದರು.ದೇವಸ್ಥಾನದ ಅಭಿವೃಧ್ದಿ ಸಮಿತಿ ಅಧ್ಯಕ್ಷರಾದ ರಾಜಶೇಖರ ಅಜ್ರಿ, ಹಾಗೂ ಸುರ್ಯಗುತ್ತು ಕುಟುಂಬಸ್ಥರಾದ ಸಂಗ್ರಾಮ್ ಎಸ್. ಜೈನ್, ಕೃತಿ.ಎಸ್. ಜೈನ್, ಆಶ್ಲೇಷ್ ಜೈನ್, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಂಜುಳಾ, ಮಾಜಿ ಅಧ್ಯಕ್ಷರಾದ ವಿಜಯ ಗೌಡ, ಹಾಗೂ ಸದಸ್ಯರು, ಇಂದಬೆಟ್ಟು ವಲಯದ ಅಂಗನವಾಡಿ ಕೇಂದ್ರದ ಮೇಲ್ವಿಚಾರಕಿ ನಾಗವೇಣಿ, ಶಾಲಾ ಶಿಕ್ಷಕ -ಶಿಕ್ಷಕಿಯರು, ವಿದ್ಯಾರ್ಥಿಗಳ ಪೋಷಕರು, ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here