ಸಿರಿಧಾನ್ಯ ಬಳಕೆ ಮತ್ತು ಮಾಹಿತಿ ಕಾರ್ಯಕ್ರಮ

0

ಶಿಶಿಲ: ಇಲ್ಲಿಯ ಸಮುದಾಯ ಭವನದಲ್ಲಿ ಆಗಸ್ಟ್ 16 ರಂದು ಸಿರಿಧಾನ್ಯ ಬಳಕೆ ಮತ್ತು ಅದರ ಉಪಯೋಗಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸಿರಿಧಾನ್ಯ ಮಾರುಕಟ್ಟೆ ಅಧಿಕಾರಿ ಸಂದೀಪ್ ರವರು ನೀಡಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀನಿವಾಸ್ ಮೂಡೆತಾಯ ಶಿಶೀಲೇಶ್ವರ ದೇವಳದ ಆಡಳಿತ ಮಂಡಳಿ ಅಧ್ಯಕ್ಷರು ನೆರವೇರಿಸಿದರು.

ಶಿಶಿಲ ಸಿ ಎ ಬ್ಯಾಂಕ್ ಮ್ಯಾನೇಜರ್ ರಂಜಿತ್ ಶೆಟ್ಟಿ, ಬ್ಯಾಂಕ್ ಆಫ್ ಬರೋಡ ಮ್ಯಾನೇಜರ್ ರಾಕೇಶ್.ಪಿ ನಾಯ್ಕ್, ಸಿಎ ಬ್ಯಾಂಕ್ ನಿರ್ದೇಶಕಿ ತಾರ, ಶಿಶಿಲ ವಲಯದ ಮೇಲ್ವಿಚಾರಕರು ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ಮಧುರ, ಸೇವಾಪ್ರತಿನಿಧಿಗಳಾದ ಅರುಣಾ, ರಶ್ಮಿತ, ಗಾಯತ್ರಿ ಹಾಗೂ ಜ್ಞಾನವಿಕಾಸ ಕೇಂದ್ರದ ಸದಸ್ಯರು ಹಾಜರಿದ್ದರು.

LEAVE A REPLY

Please enter your comment!
Please enter your name here