ವಿಶ್ವಕರ್ಮ ಸಹಕಾರ ಬ್ಯಾಂಕ್ ವತಿಯಿಂದ ಸಾಧಕರಿಗೆ ಸನ್ಮಾನ

0

ಉಜಿರೆ: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಉಜಿರೆಯ ಇಬ್ಬರಿಗೆ ವಿಶ್ವಕರ್ಮ ಸಹಕಾರ ಬ್ಯಾಂಕ್‌ ಬೋಳೂರು ಹರೀಶ್ಚಂದ್ರ ಆಚಾರ್ಯ ಪ್ರಶಸ್ತಿ ನೀಡಿ ಗೌರವಿಸಿದೆ.ವೈದ್ಯಕೀಯ ಮತ್ತು ಸಮಾಜ ಸೇವೆ ಸಲ್ಲಿಸುತ್ತಿರುವ ಡಾ.ಎಂ.ಎಂ.ದಯಾಕರ್, ರಾಜಕೀಯ ಮತ್ತು ಸಮಾಜ ಸೇವೆ, ಸಾಮಾಜಿಕ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಶಶಿಧರ್.ಎಂ ಇವರಿಗೆ ಈ ಗೌರವ ಲಭಿಸಿದೆ.

ಮಂಗಳೂರಿನ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಸಭಾಂಗಣದಲ್ಲಿ ಆ.12ರಂದು ನಡೆದ ವಿಶ್ವಕರ್ಮ ಸಹಕಾರ ಬ್ಯಾಂಕಿನ 48ನೇ ವಾರ್ಷಿಕ ಮಹಾಸಭೆಯಲ್ಲಿ ಈ ಇಬ್ಬರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ದ.ಕ. ಜಿಲ್ಲಾ ಚಿನ್ನದ ಕೆಲಸಗಾರರ ಸಂಘ, ವಿಶ್ವಕರ್ಮ ಯುವ ವೇದಿಕೆಯ ವತಿಯಿಂದ ಹಾಗೂ ಕೆಎಂಸಿ ಆಸ್ಪತ್ರೆಯ ಸಹಕಾರದೊಂದಿಗೆ ಉಚಿತ ಹೃದ್ರೋಗ ತಪಾಸಣಾ ಮತ್ತು ರಕ್ತದಾನ ಶಿಬಿರ ಇದೇ ವೇಳೆ ನಡೆಯಿತು.

ವಿಶ್ವಕರ್ಮ ಸಹಕಾರ ಬ್ಯಾಂಕಿನ ಅಧ್ಯಕ್ಷ ಡಾ. ಎಸ್.ಆರ್.ಹರೀಶ್ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.ಉಪಾಧ್ಯಕ್ಷ ಡಿ.ಭಾಸ್ಕರ ಆಚಾರ್ಯ, ನಿರ್ದೇಶಕರಾದ ಲೋಕೇಶ್ ಆಚಾರ್ಯ, ಪಿ.ಜಗದೀಶ್ ಆಚಾರ್ಯ, ಎಸ್. ಜಯಶ್ರೀ ವಿ.ಆಚಾರ್ಯ, ಬೆಳುವಾಯಿ ಸೀತಾರಾಮ ಆಚಾರ್ಯ, ಜಗದೀಶ ಕೆ., ಜಯಪ್ರಕಾಶ್ ಆಚಾರ್ಯ, ರೇಷ್ಮಾ ಆಚಾರ್ಯ, ಶರತ್ ಕೆ. ಆಚಾರ್ಯ, ಹರಿಪ್ರಸಾದ್, ಎನ್. ಗೋಪಾಲಕೃಷ್ಣ ಆಚಾರ್, ಬಿ. ಗುರುಪ್ರಸಾದ್ ಶೆಟ್ಟಿ, ಮತ್ತು ಭರತ್ ನೀಡಳ್ಳಿ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here