ಕಲ್ಮಂಜ: ದ.ಕ.ಜಿ.ಪಂ.ಸ.ಹಿ.ಪ್ರಾ ಶಾಲಾ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿ ವಕೀಲ ರಾಮಚಂದ್ರ ಶೆಣೈ ಅವರಿಂದ ಉಚಿತ ಛತ್ರಿ ವಿತರಣೆ

0

ಕಲ್ಮಂಜ: ದ.ಕ.ಜಿ.ಪಂ.ಸ.ಹಿ.ಪ್ರಾ.ಕಲ್ಮಂಜ ಶಾಲಾ ವಿದ್ಯಾರ್ಥಿಗಳಿಗೆ ಶಾಲೆಯ ಹಿರಿಯ ವಿದ್ಯಾರ್ಥಿ ವಕೀಲ,ಶ್ರೀ ರಾಮಚಂದ್ರ ಸೌಹಾರ್ದ ಸಹಕಾರಿ ಸಂಘ ಕನ್ಯಾಡಿಯ ಅಧ್ಯಕ್ಷ ರಾಮಚಂದ್ರ ಶೆಣೈ ಅವರ ಅನುಪಸ್ಥಿತಿಯಲ್ಲಿ ಕುಟುಂಬದ ಸದಸ್ಯರು ವಿದ್ಯಾರ್ಥಿಗಳಿಗೆ ಉಚಿತ ಛತ್ರಿ ವಿತರಣೆ ಮಾಡಿದರು.

ವಕೀಲ, ಶ್ರೀ ರಾಮಚಂದ್ರ ಸೌಹಾರ್ದ ಸಹಕಾರಿ ಸಂಘ ಕನ್ಯಾಡಿಯ ನಿರ್ದೇಶಕ ಶಿವಕುಮಾರ್ ಮಾತಾನಾಡಿ ರಾಮಚಂದ್ರ ಶೆಣೈ ಅವರು ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದಾರೆ.ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಸಹಕಾರಿಯಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಶ್ರೀ ರಾಮಚಂದ್ರ ಸೌಹಾರ್ದ ಸಹಕಾರಿ ಸಂಘ ಕನ್ಯಾಡಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ವಕೀಲೆ ರಶ್ಮಿ ಶೆಣೈ, ವಕೀಲ ರಾಹುಲ್, ಎಸ್.ಡಿ.ಎಂ.ಸಿ.ಅಧ್ಯಕ್ಷ ಉಮೇಶ್ ಗೌಡ, ಗ್ರಾ.ಪಂ.ಸದಸ್ಯೆ ಪೂರ್ಣಿಮಾ, ಶಾಲಾ ಮುಖ್ಯಶಿಕ್ಷಕಿ ಸುಮಿತ್ರ, ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here