ಸುಲ್ಕೇರಿಮೊಗ್ರು: ಕುಸಿದ ತಡೆಗೋಡೆ ತೆರವುಗೊಳಿಸಲು ಸಹಕರಿಸಿದ ಅಳದಂಗಡಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು

0

ಗುರುವಾಯನಕೆರೆ: ಜು.4ರಂದು ಸುರಿದ ಭಾರಿ ಮಳೆಗೆ ಸುಲ್ಕೇರಿಮೊಗ್ರು ಗ್ರಾಮದ ಮಿತ್ತಮಾರು ವರ್ಪಾಳೆಎಂಬಲ್ಲಿ ಪ್ರಮೋದ್ ಎಂಬವರ ಮನೆಯ ಸಮೀಪ ತಡೆಗೋಡೆ ರಸ್ತೆಗೆ ಕಸಿದು ಬಿದ್ದಿದ್ದು, ಅಳದಂಗಡಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ಕುಸಿದ ಮಣ್ಣು ಹಾಗೂ ಕಲ್ಲುತೆಗೆದು ತೆರವುಗೊಳಿಸಿ ವಾಹನ ಸಂಚಾರ ಸರಾಗಗೊಳ್ಳುವಂತೆ ಸಹಕರಿಸಿದರುಜು.

ಶೌರ್ಯ ವಿಪತ್ತು ನಿರ್ವಹಣಾ ಘಟಕದ ಪ್ರಕಾಶ್ ಕೊಲ್ಲಂಗೆ, ಪ್ರವೀಣ ಪೂಜಾರಿ, ನವೀನ ಪೂಜಾರಿ, ಪೂರ್ಣೇಶ ಆಚಾರ್ಯ, ಸುರೇಶ ಪೂಜಾರಿ, ಶ್ರೀಕಾಂತ ಪಟವರ್ಧನ್ ಹಾಗೂ ಘಟಕ ಪ್ರತಿನಿಧಿ ಶಕುಂತಳ ಸ್ವಯಂಸೇವಕರು ಭಾಗವಹಿಸಿದರು.

ಸ್ವಯಂಸೇವಕರಿಗೆ ಸ್ಥಳೀಯರು ಸಹಕರಿಸಿದರು.

LEAVE A REPLY

Please enter your comment!
Please enter your name here