ಅರಸಿನಮಕ್ಕಿ ಸಮೀಪ ಕಾಡಾನೆ ದಾಳಿ, ಕೃಷಿ ನಾಶ

0

ಅರಸಿನಮಕ್ಕಿ: ಅರಸಿನಮಕ್ಕಿ ಸಮೀಪ ಎ.28 ರಂದು ರಾತ್ರಿ ಕಾಡಾನೆ ದಾಳಿ ನಡೆಸಿ ಕೃಷಿ ನಾಶ ಮಾಡಿದೆ.

ಇಲ್ಲಿನ ಕೌಕ್ರಾಡಿ ಗ್ರಾಮದ ಸಮೀಪದ ಮುಂಡ್ರೇಲು ಶಂಕರ ಜೋಶಿ ಎಂಬುವವರ ಕೃಷಿ ತೋಟಕ್ಕೆ ದಾಳಿ ಮಾಡಿದ ಕಾಡಾನೆ ಆನೆ 35 ಅಡಕೆ, 40 ಬಾಳೆ, ಎರಡು ತೆಂಗಿನ ಮರ, ಅನನಾಸು, ಹಲಸಿನ ಕೃಷಿ ಸೇರಿದಂತೆ ಕೃಷಿ ತೋಟಕ್ಕೆ ಅಳವಡಿಸಿದ್ದ ಸ್ಪಿಂಕ್ಲರ್ ಗಳನ್ನು ಜಜ್ಜಿ ಪುಡಿ ಮಾಡಿವೆ. ತಿಂಗಳ ಹಿಂದೆಯೂ ಇವರ ತೋಟಕ್ಕೆ ದಾಳಿ ನಡೆಸಿದ ಆನೆ ಆ ಸಂದರ್ಭದಲ್ಲಿಯೂ ಕೃಷಿ ನಾಶ ಮಾಡಿತ್ತು.

ನಿರಂತರವಾದ ಆನೆದಾಳಿಯಿಂದ ಈ ಪರಿಸರದ ಕೃಷಿಕರಲ್ಲಿ ಆತಂಕ ಮನೆ ಮಾಡಿದೆ.

LEAVE A REPLY

Please enter your comment!
Please enter your name here