ಬೆಳ್ತಂಗಡಿ: ಸೋಮಾವತಿ ನದಿಗೆ ವಿಷ – ಸಾವಿರಾರು ಮೀನುಗಳ ಮಾರಣಹೋಮ

0

ಬೆಳ್ತಂಗಡಿ: ನಗರಕ್ಕೆ ಸಮೀಪದಲ್ಲೇ ಇರುವ ಸೋಮಾವತಿ ನದಿಗೆ ದುಷ್ಕರ್ಮಿಗಳು ವಿಷ ಹಾಕಿದ ಪರಿಣಾಮ ಸಾವಿರಾರು ಮೀನುಗಳ ಮಾರಣಹೋಮ ನಡೆದಿದೆ.
ಬೆಳ್ತಂಗಡಿ ನಗರಕ್ಕೆ ನೀರು ಸರಬರಾಜು ಆಗುತಿದ್ದ ಸೋಮವತಿ ನದಿಯ ದೊಡ್ಡ ಹಳ್ಳಕ್ಕೆ ಎ.25ರ ರಾತ್ರಿ ಯಾರೋ ವಿಷ ಹಾಕಿದ್ದು, ಇದರಿಂದ ಇಲ್ಲಿ ರಾಶಿ ರಾಶಿ ಮೀನುಗಳು ಸತ್ತು ಬಿದ್ದಿವೆ.

ಈಗಾಗಲೇ ನಗರ ಪಂಚಾಯತ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು ನೀರು ಸರಬರಾಜು ಸ್ಥಗಿತಗೊಳಿಸಲಾಗಿದೆ.ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಪಟ್ಟಣ ಪಂಚಾಯತ್ ದೂರು ನೀಡಿದೆ.

LEAVE A REPLY

Please enter your comment!
Please enter your name here