ಗುರುವಾಯನಕೆರೆಯಲ್ಲಿ ಎಸ್.ಐ.ಹರೀಶ್ ನೇತೃತ್ವದ ಕಾರ್ಯಾಚರಣೆ: ಇಬ್ಬರ ಬಂಧನ, ಹತ್ತು ಸಾವಿರ ರೂ ಮೌಲ್ಯದ ಗಾಂಜಾ ವಶ

0

ಬೆಳ್ತಂಗಡಿ: ಕುವೆಟ್ಟು ಗ್ರಾಮದ ಗುರುವಾಯನಕೆರೆಯ ಸರಕಾರಿ ಪ್ರೌಢಶಾಲೆಯ ಬಳಿ ಗಾಂಜಾ ಸೇವಿಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. ನಂ 34/2023 ಕಲಂ; 8(ಸಿ),20 (ಬಿ) ಎನ್ ಡಿ ಪಿ ಎಸ್ ಕಾಯ್ದೆಯಡಿ ಕೇಸ್ ದಾಖಲಾಗಿದೆ.
ಎ.26ರಂದು ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಗುರುವಾಯನಕೆರೆ ಸರ್ಕಾರಿ ಪ್ರೌಡ ಶಾಲೆಯ ಹತ್ತಿರ ಎಸ್.ಐ. ಹರೀಶ್ ಎಮ್.ಆರ್.‌ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಕುವೆಟ್ಟು ಗ್ರಾಮದ ಮನ್ಸೂರ್ ಎಂಬವರ ಮಗ ಖೈಸ್ ಮತ್ತು ಇಂತಿಯಾಜ್ ಎಂಬವರ ಮಗ ಮೊಹಮ್ಮದ್ ಅಶ್ರಫ್ ಎಂಬವರನ್ನು ಬಂಧಿಸಿ ಹತ್ತು ಸಾವಿರ ರೂ ಮೌಲ್ಯದ 294 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here