ಕನಕಮಜಲಿನ ಕನಕದಾಸ ಮಕ್ಕಳ ಭಜನಾ ಮಂಡಳಿಯ ಸಭೆಯು ಇತ್ತೀಚೆಗೆ ನಡೆದಿದ್ದು ಭಜನಾ ಮಂಡಳಿಗೆ ನೂತನ ಮಕ್ಕಳನ್ನು ಸೇರ್ಪಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಕಾಟುಕುಕ್ಕೆ ಚಾರಿಟೇಬಲ್ ಟ್ರಸ್ಟ(ರಿ)ನ ಜತೆ ಕಾರ್ಯದರ್ಶಿ ಹಾಗೂ ಸುಳ್ಯದ ಶಾಂತಿನಗರ ದೀಪಾಂಜಲೀ ಮಹಿಳಾ ಭಜನಾ ಮಂಡಳಿಯ ಅಧ್ಯಕ್ಷೆ ಶ್ರೀಮತಿ ಹರ್ಷಾ ಕರುಣಾಕರ ಸೇರ್ಕಜೆಯವರು ಭಜನಾ ತಂಡದ ಕಾರ್ಯ ನಿರ್ವಹಣೆಯ ಜವಾಬ್ದಾರಿಯ ಬಗ್ಗೆ ಮಾಹಿತಿ ನೀಡಿದರು.
ದೀಪಾಂಜಲೀ ಮಹಿಳಾ ಭಜನಾ ಮಂಡಳಿಯ ಸದಸ್ಯೆ ಶ್ರೀಮತಿ ಸುಮತಿ ನಾಯಕ್ ರವರು ‘ಭಜನೆ’ಯ ಮಹತ್ವವನ್ನು ತಿಳಿಸಿದರು. ಕನಕದಾಸ ಮಕ್ಕಳ ಭಜನಾ ಮಂಡಳಿಯ ಸಂಚಾಲಕಿ ಶ್ರೀಮತಿ ಹೇಮಲತಾ ಕಜೆಗದ್ದೆಯವರು ಕಾರ್ಯಕ್ರಮ ನಿರ್ವಹಿಸಿದರು.