ಬಾಂಬ್ ಸ್ಪೋಟ ಪ್ರಕರಣ;ಸ್ಯಾಟಲೈಟ್ ಕರೆ ತನಿಖೆಗೆ ಹೋದ ಪೊಲೀಸರಿಗೆ ಸಿಕ್ಕಿದೆ ಸ್ಪೋಟಕ ಮಾಹಿತಿ.

0

ಚಾರ್ಮಾಡಿ: ಬಾಂಬ್ ಸ್ಪೋಟ ಪ್ರಕರಣ,ತುಂಗಾತೀರದಲ್ಲಿ ಮಾತ್ರವಲ್ಲ, ಚಾರ್ಮಾಡಿ ತಪ್ಪಲಿನಲ್ಲೂ ನಡೀತಾ ಟ್ರಯಲ್ ಬ್ಲಾಸ್ಟ್. ಸ್ಯಾಟಲೈಟ್ ಕರೆ ತನಿಖೆಗೆ ಹೋದ ಪೊಲೀಸರಿಗೆ ಸಿಕ್ಕಿದೆ ಸ್ಪೋಟಕ ಮಾಹಿತಿ.

ಸ್ಯಾಟಲೈಟ್ ಕರೆ ಬಗ್ಗೆ ಟಿವಿ9 ವರದಿ ಬಳಿಕ ಸ್ಥಳಕ್ಕೆ ಹೋಗಿದ್ದ ಪೊಲೀಸರು ಕಳೆದ ಏಳೆಂಟು ದಿನದ ಹಿಂದೆ ಚಾರ್ಮಾಡಿ ಅರಣ್ಯದಂಚಿನಲ್ಲಿ ಬಾಂಬ್ ಸ್ಪೋಟವಾದ ಅದೊಂದು ಭಾರೀ ಸದ್ದು ಕೇಳಿ ಸ್ಥಳೀಯರಿಗೆ ಶಾಕ್ ಯಾಗಿದೇ.

ರಾತ್ರಿ ಸುಮಾರಿಗೆ 11 ಗಂಟೆ  ಭಾರೀ ಪ್ರಮಾಣದ ಸ್ಪೋಟದ ಸದ್ದು. ಬೆಳ್ತಂಗಡಿ ತಾಲೂಕಿನ ಬೆಂದ್ರಾಳ ಅರಣ್ಯ ಪ್ರದೇಶದಲ್ಲಿ ಕೇಳಿಬಂತು. ಸ್ಯಾಟಲೈಟ್ ಕರೆ ಹಿಂದೆ ಬಿದ್ದ ಪೊಲೀಸರಿಗೆ ಗ್ರಾಮಸ್ಥ ಚೆಲುವಮ್ಮ ಎಂಬುವವರಿಂದ ಪೊಲೀಸರಿಗೆ ದೂರು ನೀಡಿದರು.

ಭಾರೀ ಪ್ರಮಾಣದ ಸದ್ದು ಕೇಳಿಬಂದಿತ್ತು. ಆನೆ ಬಂದಾಗ ಓಡಿಸಲು ಗರ್ನಾಲ್ ಅಂತಾ ಎಲ್ಲರು ಅಂದುಕೊಂಡಿದ್ದೆವು.

ಆದ್ರೆ ಅದು ಗರ್ನಾಲ್ ಸೌಂಡ್ ಗಿಂತ ಹೆಚ್ಚಾಗಿತ್ತು ಅಂತಾ ಮಾಹಿತಿ ನೀಡಿದರು.

LEAVE A REPLY

Please enter your comment!
Please enter your name here