Site icon Suddi Belthangady

ಕೊಡಿಯಾಲ್ ಬೈಲು ಶಾಲೆಗೆ ಕೈ ತೊಳೆಯುವ ನೀರಿನ ಘಟಕ ಕೊಡುಗೆ ಹಾಗೂ ಉದ್ಘಾಟನೆ

ಬೆಳ್ತಂಗಡಿ: ಕಡಿರುದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷರು, ಕೊಡಿಯಾಲ್ ಬೈಲು ಸ.ಹಿ.ಪ್ರಾ ಶಾಲಾ ಶಾಲಾಭಿವೃದ್ಧಿ ಸಮಿತಿ ನಾಮನಿರ್ದೇಶಕಿ ರತ್ನಾವತಿ ಬಾಲಕೃಷ್ಣ ಗೌಡ ಮಾವಿನಕಟ್ಟೆ ಹಾಗೂ S.K.D.R.P ಒಕ್ಕೂಟ ಕಾನರ್ಪ ಇದರ ಸಹಯೋಗದೊಂದಿಗೆ ರೂ.26,000/- ವೆಚ್ಚದಲ್ಲಿ ಸ.ಹಿ.ಪ್ರಾ.ಶಾಲೆ ಕೊಡಿಯಾಲ್ ಬೈಲು ಶಾಲೆಗೆ ಸುಸಜ್ಜಿತವಾದ ಕೈ ತೊಳೆಯುವ ನೀರಿನ ಘಟಕವನ್ನು ಕೊಡುಗೆಯಾಗಿ ನಿರ್ಮಿಸಿ ಕೊಡಲಾಯಿತು. ಈ ನೀರಿನ ಘಟಕವನ್ನು ಕಡಿರುದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ರತ್ನಾವತಿ ಬಾಲಕೃಷ್ಣ ಗೌಡ ಉದ್ಘಾಟಿಸಿದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಘವೇಂದ್ರ ಪಟವರ್ಧನ್ ಕೋಡಿ, ಬಾಲಕೃಷ್ಣ ಗೌಡ ಮಾವಿನಕಟ್ಟೆ, ಮಹೇಶ್ ಕೌಡಂಗೆ ಶಾಲಾ ಮುಖ್ಯೋಪಾಧ್ಯಾಯ ಫಿಲೋಮಿನಾ, ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Exit mobile version