Site icon Suddi Belthangady

ಕೊಕ್ಕಡ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ-ಪೆರಿಯಶಾಂತಿ ಬೀದಿಬದಿ ಅಂಗಡಿಗಳಲ್ಲಿ ಹಲಸು,ಹಣ್ಣು ಮಾರಾಟ-ಅಲ್ಲಲ್ಲಿ ಎಸೆದಿರುವ ಹಲಸಿನ ತ್ಯಾಜ್ಯದಿಂದಾಗಿ ಅಂಗಡಿ ಸುತ್ತಮುತ್ತ ತಿರುತ್ತಿರುವ ಕಾಡಾನೆಗಳು-ಅಂಗಡಿ ತೆರವಿಗೆ ಅರಣ್ಯ ಅಧಿಕಾರಿಗಳ ಮನವಿ

ಬೆಳ್ತಂಗಡಿ: ಕೊಕ್ಕಡ ಕಾಡಾನೆಗಳ ಹಾವಳಿಯಿಂದಾಗಿ ದುಬಾರೆಯ ವಿಶೇಷ ತಂಡ ಆನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆಯಲ್ಲಿ ತೊಡಗಿದೆ. ಆದರೆ, ಪೆರಿಯಶಾಂತಿ ಬಳಿ ಕಾಡಾನೆಗಳು ಮತ್ತೆ ಮತ್ತೆ ಬೀದಿಬದಿ ಅಂಗಡಿಗಳತ್ತ ಬರುತ್ತಿವೆ.

ಅಲ್ಲಿ ಹಲಸಿನ ಹಣ್ಣು ಮಾರಾಟ ಮಾಡುತ್ತಿದ್ದು, ಅಲ್ಲದೆ ಹಲಸಿನ ಹಣ್ಣಿನ ತ್ಯಾಜ್ಯ ಅಲ್ಲಲ್ಲೇ ಎಸೆದಿದ್ದು ಅದರ ವಾಸನೆಗೆ ಆನೆಗಳು ಪೆರಿಯಶಾಂತಿಯತ್ತ ಬರುತ್ತಿರುವುದರಿಂದ ಆತಂಕ ಮನೆ ಮಾಡಿದೆ. ಅಲ್ಲದೆ ಆನೆಗಳು ಈಗಾಗಲೇ ಅಲ್ಲಿಗೆ ಆಗಮಿಸಿದ್ದು,ಅಲ್ಲಿ ಲದ್ದಿ ಕಂಡುಬಂದಿದ್ದು ಆತಂಕಕ್ಕೆ ಕಾರಣವಾಗಿದೆ.

ಇದಕ್ಕಾಗಿ ಆನೆಗಳ ಕಾರ್ಯಾಚರಣೆಗೆ ನೆರವಾಗಲು ಅಂಗಡಿಗಳ ತೆರವುಗೊಳಿಸಲು ಅರಣ್ಯ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ. ಇಲ್ಲವಾದಲ್ಲಿ ಕಾಡಾನೆಗಳ ದಾಳಿಗೆ ತುತ್ತಾಗುವ ಭೀತಿಯಿದೆ ಎಂಬುದಾಗಿ ಎಚ್ಚರಿಸಿದ್ದಾರೆ. ಈ ಬಗ್ಗೆ ಅರಣ್ಯ ಅಧಿಕಾರಿಗಳು ಸುದ್ದಿಗೆ ಮಾಹಿತಿ ನೀಡಿದ್ದಾರೆ.

Exit mobile version