Site icon Suddi Belthangady

ಶಿರ್ಲಾಲು: ಸುಶೀಲ ಪೂಜಾರಿಯವರ ಪುಣ್ಯಸ್ಮರಣೆ ಪ್ರಯುಕ್ತ ಸೇವಾ ಯೋಜನೆ ಹಸ್ತಾಂತರ

ಶಿರ್ಲಾಲು: ಸುಶೀಲಾ ಪೂಜಾರಿ ಊರ ಇವರ ಮೂರನೇ ವರ್ಷದ ಪುಣ್ಯಸ್ಮರಣೆ ಪ್ರಯುಕ್ತ ಅವರ ಪುತ್ರ ಉದ್ಯಮಿ ಸುರೇಶ್ ಪೂಜಾರಿ ಊರ ಹಾಗೂ ಕುಟುಂಬಸ್ಥರಿಂದ ಆರೋಗ್ಯ ನಿಧಿ ವಿದ್ಯಾನಿಧಿ ಹಸ್ತಾಂತರ ಮಾಡಲಾಯಿತು.

ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 88% ಅಂಕ ಪಡೆದ ಕರಂಬಾರು ಗ್ರಾಮದ ವಿದ್ಯಾರ್ಥಿ ಶಾಶ್ವತ್ ಇವರನ್ನು ಗೌರವಿಸಲಾಯಿತು. ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಕಾಪಿನಡ್ಕ ನಿವಾಸಿ ಮೀನಾಕ್ಷಿ ಇವರ ಚಿಕಿತ್ಸೆಗಾಗಿ ಧನ ಸಹಾಯ ನೀಡಲಾಯಿತು. ಸದಾನಂದ ಪೂಜಾರಿ ಉಂಗಿಲಬೈಲು, ಸುರೇಶ್ ಪೂಜಾರಿ ಅಭಿಮಾನಿ ಬಳಗದ ಸದಸ್ಯರು, ಕುಟುಂಬಸ್ಥರು ಉಪಸ್ಥಿತರಿದ್ದರು.

Exit mobile version