Site icon Suddi Belthangady

ನಾಟ್ಯ ತರಬೇತಿ ಪುನರಾರಂಭ

ಬೆಳ್ತಂಗಡಿ: ಯಕ್ಷಭಾರತಿ ಸಂಸ್ಥೆಯ 2025-26ನೇ ಶೈಕ್ಷಣಿಕ ವರ್ಷದ ಯಕ್ಷಗಾನ ನಾಟ್ಯ ತರಬೇತಿಯು ಮೇ.25ರಂದು ಉಜಿರೆಯ ನಾಗರಾಜ ಕಾಂಪೌಂಡ್ ನ ಶ್ರೀ ಮಾತಾದಲ್ಲಿ ಆರಂಭವಾಯಿತು.

ನಾಟ್ಯ ತರಬೇತಿ ಕೇಂದ್ರದ ಗುರುಗಳಾದ ಚಂದ್ರಶೇಖರ ಧರ್ಮಸ್ಥಳ ದೀಪ ಪ್ರಜ್ವಲಿಸುವುದರ ಮೂಲಕ ಚಾಲನೆ ನೀಡಿದರು. ಯಕ್ಷಭಾರತಿಯ ಸಂಚಾಲಕ ಮಹೇಶ ಕನ್ಯಾಡಿ, ಆಹ್ವಾನಿತ ಸದಸ್ಯ ಯಶೋಧರ ಇಂದ್ರ, ರೂಪೇಶ್ ಮಲ್ಲರ್ ಮಾಡಿ ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.

Exit mobile version