Site icon Suddi Belthangady

ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಚೆಕ್ ವಿತರಣೆ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ರಿಜಿಸ್ಟರ್ ಧರ್ಮಸ್ಥಳ ಹಾಗೂ ಸಮುದಾಯ ಅಭಿವೃದ್ಧಿ ವಿಭಾಗದ ವತಿಯಿಂದ ಶ್ರೀ ನಾಗ ರಕ್ತೇಶ್ವರಿ ಹಾಗೂ ಪರಿವಾರ ದೈವಗಳ ಸಾನಿಧ್ಯ ಕ್ಷೇತ್ರ ನಾಗಚಾವಡಿ, ಗುಂಪಲಾಜೆ , ಪಣೆಜಾಲು, ಓಡಿಲ್ನಾಳ ಗ್ರಾಮದ ಪಂಚಕಲ್ಯಾಣ ಮಹಾ ಮಹೋತ್ಸವದ ಕಾರ್ಯ ಚಟುವಟಿಕೆ ಕಾರ್ಯದ ಬಗ್ಗೆ ಮಂಜೂರಾದ 1ಲಕ್ಷ ಚೆಕ್ ವಿತರಣೆ ಮಾಡಲಾಯಿತು.

ತಾಲೂಕಿನ ಯೋಜನಾಧಿಕಾರಿ ಅಶೋಕ್ ರವರು ಚೆಕ್ ವಿತರಣೆ ಮಾಡಿದರು. ಶ್ರೀ ನಾಗರಕ್ತೇಶ್ವರಿ ಹಾಗೂ ಪರಿವಾರ ದೈವಗಳ ಸಾನಿಧ್ಯ ಕ್ಷೇತ್ರದ ಟ್ರಸ್ಟ್ ನ ಅಧ್ಯಕ್ಷ ಶಶಿರಾಜ್ ಶೆಟ್ಟಿ, ಕೋಶಾಧಿಕಾರಿ ಶೈಲೇಶ್, ಸದಸ್ಯರಾದ ಶಂಕರ ಗಾಣಿಗ, ವಾರ್ಷಿಕ ನೇಮೋತ್ಸವ ಸಮಿತಿಯ ಅಧ್ಯಕ್ಷ ಕೆ. ಶಶಿಧರ್ ಹೆಗ್ಡೆ, ಉಪಾಧ್ಯಕ್ಷೆ ಆಶಾ, ಸದಸ್ಯೆ ನಳಿನಿ, ವಲಯದ ಮೇಲ್ವಿಚಾರಕಿ ಯಶೋಧ ಗುರುವಾಯನಕೆರೆ, ಒಕ್ಕೂಟದ ಅಧ್ಯಕ್ಷ ನಾಗೇಶ್ ರವರು ಉಪಸ್ಥಿತರಿದ್ದರು.

Exit mobile version