Site icon Suddi Belthangady

ಮಿಯ್ಯಾರು: ಶ್ರೀ ವನದುರ್ಗಾಪರಮೇಶ್ವರಿ ದೇವಳದ ನೂತನ ವ್ಯವಸ್ಥಾಪನ ವತಿಯಿಂದ ಮಾಂಜಿಲು ಶ್ರೀಪತಿ ಹೆಬ್ಬಾರ್ ಗೆ ಗೌರವಾರ್ಪಣೆ

ಮಿಯ್ಯಾರು: ಶ್ರೀ ವನದುರ್ಗಾ ಪರಮೇಶ್ವರಿ ದೇವಸ್ಥಾನ ಇದರ ನೂತನ ವ್ಯವಸ್ಥಾಪನ ಸಮಿತಿಯ ವತಿಯಿಂದ ದೇವಸ್ಥಾನದ ಡೆವಲಪ್ಮೆಂಟ್ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀಪತಿ ಹೆಬ್ಬಾರ್ ರವರನ್ನು ಗೌರವಿಸಿ ಅವರ ಆಶೀರ್ವಾದವನ್ನು ಪಡೆದರು. ದೇವಸ್ಥಾನದ ಗೌರವಾಧ್ಯಕ್ಷರಾದ ರಮೇಶ್ ಪ್ರಭು ಇವರನ್ನು ದೇವಸ್ಥಾನದ ಸಮಿತಿಯ ವತಿಯಿಂದ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಬೊಮ್ಮನಗೌಡ ಮಠ, ಕಾರ್ಯದರ್ಶಿಯಾದ ಸಂತೋಷ ಕೆ ಸಿ. ಕೋಶಧಿಕಾರಿ ಸಾಜು ಕೆ.ಆರ್. ಉಪಾಧ್ಯಕ್ಷರಾದ ಜನಾರ್ಧನ ಪೂಜಾರಿ, ಉಪ ಕಾರ್ಯದರ್ಶಿಯಾದ ಶುಭನಿತ ಹಾಗೂ ಸಮಿತಿಯ ಸದಸ್ಯರಾದ ಹರಿಣಾಕ್ಷಿ, ನಾರಾಯಣ ನಾಯ್ಕ್, ಸೋಮನಾಥ ಗೌಡ ಮುಳಿಮಜಲು ಉಪಸ್ಥಿತಿರಿದ್ದರು.

Exit mobile version