Site icon Suddi Belthangady

ಅನಾರೋಗ್ಯದಿಂದ ಬಳಲುತ್ತಿದ್ದ ಕುಪ್ಪೆಟ್ಟಿಯ ಶ್ರಾವ್ಯಾ ನಿಧನ

ಬೆಳ್ತಂಗಡಿ: ತಾಲೂಕಿನ ಉರುವಾಲು ಗ್ರಾಮದ ಕುಪ್ಪೆಟ್ಟಿ ಸಮೀಪದ ಕಾರ್ಯಡ್ಕ ಎಂಬಲ್ಲಿನ ಶ್ರಾವ್ಯಾ ಜೆ.ಎಂ.(23)ಕ್ಯಾನ್ಸರ್ (ಗರ್ಭಕಂಠದ ಇವಿಂಗ್ಸ್ ಸಾರ್ಕೊಮ) ರೋಗದಿಂದ ಬಳಲುತ್ತಿದ್ದು, ಅ.11ರಂದು ಮನೆಯಲ್ಲಿ ನಿಧನರಾದರು.

ಕೆಲದಿನಗಳಿಂದ ಮಂಗಳೂರಿನ ಎಂ.ಐ.ಒ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು, ಹೆಚ್ಚಿನ ಚಿಕಿತ್ಸೆಗಾಗಿ 3 ಲಕ್ಷ ರೂ. ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದ ಮೇರೆಗೆ, ಬಡಕುಟುಂಬಕ್ಕೆ ನೆರವಾಗಲು ಸ್ಥಳೀಯರು ವಾಟ್ಸಾಪ್ ಗ್ರೂಪ್ ರಚಿಸಿ ಶ್ರಾವ್ಯಾರ ಚಿಕಿತ್ಸೆಗೆ ನೆರವಾಗಲು ವಿನಂತಿಸಿದ್ದರು.

ಮೃತರು ತಂದೆ ಜನಾರ್ದನ ಪೂಜಾರಿ, ತಾಯಿ ರೇವತಿ ಹಾಗೂ ತಂಗಿ ಶ್ರೇಯಾ ರವರನ್ನು ಅಗಲಿದ್ದಾರೆ.

Exit mobile version