Site icon Suddi Belthangady

ಬಂಟ್ವಾಳದಲ್ಲಿ ಅಪಘಾತ: ಪುದುವೆಟ್ಟಿನ ಯುವಕ ಸಾವು

ಬೆಳ್ತಂಗಡಿ: ಬಂಟ್ವಾಳ ತಾಲೂಕು ಕೆದಿಲ ಗ್ರಾಮದ ಗಡಿಯಾರ ಎಂಬಲ್ಲಿ ಜು.9ರಂದು ಟ್ಯಾಂಕರ್ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಜು.15ರಂದು ಮೃತಪಟ್ಟಿದ್ದಾರೆ.

ಪುದುವೆಟ್ಟು ಗ್ರಾಮದ ಬಾಜಿದಡಿ ನೋಣಯ್ಯ ಪೂಜಾರಿ – ಮೀನಾಕ್ಷಿ ದಂಪತಿ ಪುತ್ರ ಗಣೇಶ್ (39 ವ) ಮೃತಪಟ್ಟವರು. ಟ್ಯಾಂಕರ್ ಚಾಲಕ ಮಹಮ್ಮದ್ ಆಸಿಫ್ ಎಂಬಾತ ಅಜಾಗರೂಕತೆಯಿಂದ ವಾಹನ ಚಲಾಯಿಸಿದ್ದು, ಈ ವೇಳೆ ಬೈಕ್‌ಗೆ ಡಿಕ್ಕಿಯಾಗಿ ಗಣೇಶ್ ರಸ್ತೆಗೆ ಎಸೆಯಲ್ಪಟ್ಟಿದ್ದರು. ಅವರನ್ನು ಗಂಭೀರ ಸ್ಥಿತಿಯಲ್ಲಿ ಮಂಗಳೂರಿನ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.

ವಿದೇಶದಿಂದ ಪತ್ನಿ ವಾಪಸ್: ಪತ್ನಿಯ ಮನೆ ವೇಣೂರಿನಲ್ಲಿದ್ದು, ಗಣೇಶ್ ಅಲ್ಲಿಯೇ ವಾಸವಾಗಿದ್ದರು. ಪತ್ನಿ ಮಸ್ಕತ್‌ನಲ್ಲಿ ಉದ್ಯೋಗದಲ್ಲಿದ್ದು, ಘಟನೆಯ ಬಳಿಕ ವಾಪಸ್ಸಾಗಿದ್ದಾರೆ.

ಗಣೇಶ್ ಅವರು ಪತ್ನಿ ಪೂರ್ಣಿಮಾ, ತಂದೆ, ತಾಯಿ, ಸಹೋದರ ಯಶೋಧರ, ಸಹೋದರಿ ಪ್ರಮೀಳಾರನ್ನು ಅಗಲಿದ್ದಾರೆ.

ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version