Site icon Suddi Belthangady

ನಾರ್ಯ ವಿಶೇಷ ಚೇತನ ಬಡ ಕುಟುಂಬಕ್ಕೆ ಧರ್ಮಸ್ಥಳ ಗ್ರಾಮ ಪಂಚಾಯತ್ ನಿಂದ ನೆರವು

ಧರ್ಮಸ್ಥಳ ಗ್ರಾಮ ಪಂಚಾಯತಿ ವ್ಯಾಪ್ತಿಯ ದೊಂಡೋಲೆ ನಾರ್ಯ ಎಂಬಲ್ಲಿ ವಾಸವಾಗಿರುವ ಕಮಲ ತನಿಯ ಬಡ ಕುಟುಂಬದಲ್ಲಿ ಗಂಗಯ್ಯ, ಮೋನಮ್ಮ, ತುಂಗಪ್ಪ, ಮೂರು ಜನ ಮಕ್ಕಳು ವಿಶೇಷ ಚೇತನರು ಆಗಿದ್ದು, ಈ ಕುಟುಂಬಕ್ಕೆ ಧರ್ಮಸ್ಥಳ ಗ್ರಾಮ ಪಂಚಾಯತಿಯಿಂದ ವೀಲ್ ಚಯರ್, ಶೌಚಾಲಯದ ಪೀಠೋಪಕರಣಗಳು, ಹ್ಯಾಂಡ್ ಸ್ಟಿಕ್ ಸಾಮಗ್ರಿಗಳನ್ನು ಅವರ ಮನೆಗೆ ತೆರಳಿ ವಿತರಿಸಲಾಯಿತು.

ಕುಟುಂಬದ ಮೂಲಭೂತ ಸೌಕರ್ಯದ ಬಗ್ಗೆ ಧರ್ಮಸ್ಥಳ ಗ್ರಾಮ ಪಂಚಾಯತ್ ಸದಾ ಇರುತ್ತದೆ ಎಂದು ತಿಳಿಸಲಾಯಿತು.

ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪಿ.ಶ್ರೀನಿವಾಸ್ ರಾವ್, ಸದಸ್ಯರುಗಳಾದ ಸುಧಾಕರ ಗೌಡ, ರೇವತಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಉಮೇಶ್ ಕೆ, ಪಂಚಾಯತಿ ಕಾರ್ಯದರ್ಶಿ ದಿನೇಶ್ ಎಂ, ಲೆಕ್ಕ ಸಹಾಯಕಿ ಪ್ರಮೀಳಾ, ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Exit mobile version