Site icon Suddi Belthangady

ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ಕುಕ್ಕಾವು ಜನಾರ್ಧನ ಗೌಡರಿಗೆ ವೈದ್ಯಕೀಯ ನೆರವು

ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ಮಿತ್ತಬಾಗಿಲು ಗ್ರಾಮದ ಕುಕ್ಕಾವು ಸಮೀಪ ಪಿಲತ್ತಡಿ ಎಂಬಲ್ಲಿ ಮರದಿಂದ ಬಿದ್ದು ಕಾಲಿನ ಸ್ವಾಧೀನ ಕಳಕೊಂಡಿರುವ ಜನಾರ್ಧನ ಗೌಡರಿಗೆ ರೂ 16,000/-ಮೊತ್ತದ ವಿಶೇಷ ಮಂಚ ಹಾಗೂ ರೂ 11,000/- ಧನ ಸಹಾಯವನ್ನು ನೀಡಲಾಯಿತು. ರೊ.ಮೇಜರ್ ಜನರಲ್ ಎಂ.ವಿ.ಭಟ್, ರೊ.ಡಾ।ಗೋಪಾಲಕೃಷ್ಣ ಭಟ್, ರೊ.ವಿದ್ಯಾಕುಮಾರ್ ಕಾಂಚೋಡು ಮತ್ತು ರೊ.ಅನಂತ ಭಟ್ ಈ ಸಂದರ್ಭದಲ್ಲಿ ಹಾಜರಿದ್ದರು.ಸಮಾಜ ಸೇವಕರಾದ ಕಕ್ಕನೇಜಿ ವಾಸುದೇವ ಭಟ್ ಉಪಸ್ಥಿತರಿದ್ದರು.

Exit mobile version