Site icon Suddi Belthangady

ಆನೆಗಳು ಕೃಷಿಯನ್ನು ಹಾನಿ ಮಾಡಿರುವ ಬಗ್ಗೆ ಕ್ರಮಕೈಗೊಳ್ಳುವಂತೆ ಧರ್ಮಸ್ಥಳ ಸಾರ್ವಜನಿಕರಿಂದ ಅರಣ್ಯ ಅಧಿಕಾರಿಗೆ ಮನವಿ

ಧರ್ಮಸ್ಥಳ: ಕಳೆದ ಎರಡು ವಾರಗಳಿಂದ ಧರ್ಮಸ್ಥಳ ಗ್ರಾಮದ ಪೊಸೊಳಿಕೆ ನೇರ್ತನೆ ಮುಳಿಕ್ಕಾರು ಭಾಗಗಳಲ್ಲಿ ಆನೆಗಳು ಬರುತ್ತಿದ್ದು ಕೃಷಿಗೆ ಹಾನಿ ಮಾಡುತ್ತಿರುವುದಲ್ಲದೆ ಸಾರ್ವಜನಿಕರಿಗೆ ಮತ್ತು ಕೃಷಿಕರಿಗೆ ತುಂಬಾ ಅಪಾಯವಿರುವುದರಿಂದ ಆನೆಗಳನ್ನು ಈ ಗ್ರಾಮದಿಂದ ಓಡಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ವಲಯ ಅರಣ್ಯಾಧಿಕಾರಿ ಮೋಹನ್ ಕುಮಾರ್ ರಿಗೆ ಸೆ.15 ರಂದು ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾ.ಪಂ ಅಧ್ಯಕ್ಷೆ ವಿಮಲಾ, ಉಪಾಧ್ಯಕ್ಷ ಶ್ರೀನಿವಾಸ್ ರಾವ್, ಪಂಚಾಯತ್ ಸದಸ್ಯರುಗಳು, ಧರ್ಮಸ್ಥಳ ಸಹಕಾರಿ ಸಂಘದ ಅಧ್ಯಕ್ಷ ಪ್ರೀತಮ್.ಡಿ., ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಧನಲಕ್ಷ್ಮೀ ಜನಾರ್ಧನ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಉಮೇಶ್, ಊರಿನ ನಾಗರೀಕರು ಹಾಜರಿದ್ದರು.

Exit mobile version