Site icon Suddi Belthangady

ಉಜಿರೆ: ಸುರ್ಯ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ನಿಧನ

ಉಜಿರೆ : ಸುರ್ಯ ಶ್ರೀ ಸದಾಶಿವ ರುದ್ರ ದೇವಸ್ಥಾನ ಇದರ ಅನುವಂಶಿಕ ಆಡಳಿತ ಮುಖ್ಯಸ್ಥರು ಹಾಗೂ ನಿವೃತ್ತ ಅಸಿಸ್ಟೆಂಟ್ ಕಮಿಷನರ್ ಪೊಲೀಸ್ (ACP) ಆದ ಶ್ರೀಯುತ ಸುಭಾಷ್ ಚಂದ್ರ, ಸೂರ್ಯ ಗುತ್ತು ಇವರು ಮೇ 31ರಂದು ಮುಂಜಾನೆ 2:45 ಕ್ಕೆ ದೈವಾಧೀನರಾಗಿದ್ದಾರೆ .

ಮಂಗಳೂರು ಅಶೋಕನಗರದ ಫಲ್ಗುಣಿ ನಗರದ ಅವರ ನಿವಾಸದಲ್ಲಿ ಬೆಳಗ್ಗೆ 8.30ರ ವರಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ನಂತರ ಅವರ ಹುಟ್ಟೂರಾದ ಸುರ್ಯಗುತ್ತಿನಲ್ಲಿ ಅವರ ಅಂತ್ಯಕ್ರಿಯೆಯ ವಿಧಿ ವಿಧಾನವನ್ನು ಮದ್ಯಾಹ್ನ 12 ಗೆ ನೆರವೇರಿಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

Exit mobile version