Site icon Suddi Belthangady

ಬಜಿರೆ : ಮೂಲಭೂತ ಸೌಕರ್ಯ ಒದಗಿಸಲು ರೈತ ಸಂಘ ಒತ್ತಾಯ

ವೇಣೂರು : ಕರ್ನಾಟಕ ರಾಜ್ಯ ರೈತ ಸಂಘದ ಯುವ ರೈತ ಘಟಕ – ರಾಜ್ಯ ಸಂಚಾಲಕ ಮತ್ತು ಜಿಲ್ಲಾಧ್ಯಕ್ಷ ಹಾಗೂ ಸರ್ವೋದಯ ಕರ್ನಾಟಕ ಪಕ್ಷದ ವಿಧಾನ ಸಭಾ ಅಭ್ಯರ್ಥಿ ಆದಿತ್ಯ ಎನ್.ಕೊಲ್ಲಾಜೆ ಮತ್ತು ಅವರ ತಂಡ ಬಜಿರೆ, ಗ್ರಾಮಕ್ಕೆ ಸಹಿ ಅಭಿಯಾನ ಮತ್ತು ಜನರ ಸಮಸ್ಯೆಗಳನ್ನು ಅರಿಯಲು ಮಾ.22 ರಂದು ಭೇಟಿ ನೀಡಿದರು.
ಈ ಸಂದರ್ಭ ಗ್ರಾಮಸ್ಥರು, ಕಳೆದ 5 ವರ್ಷಗಳಿಂದ ಹಲವೆಡೆ ನೀರಿಲ್ಲದೆ, ಕೆಲವೆಡೆ ವಿದ್ಯುತ್ ಇಲ್ಲದೆ ಪರದಾಡುತ್ತಿದ್ದಾರೆ ಎಂದು ದೂರಿದರು. ಜನ ಪ್ರತಿನಿಧಿಗಳು ಉದ್ದೇಶ ಪೂರ್ವಕವಾಗಿ ಸಹಾಯ ಮಾಡುತ್ತಿಲ್ಲ. ಮನೆಗಳ ದುರಸ್ಥಿಗೆ ಗ್ರಾಮಸ್ಥರು ಪಂಚಾಯಿತಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ನಿರ್ಲಕ್ಷ್ಯ ವಹಿಸಿದ್ದರೆ ಎಂದು ಆರೋಪಿಸಿದರು.
ಈ ಬೇಜವಾಬ್ದಾರಿಯನ್ನು ರೈತ ಯುವ ಮುಖಂಡರು ಖಂಡಿಸಿದ್ದು, ಮುಂಬರುವ ವಾರದಲ್ಲಿ ಸಹಿ ಅಭಿಯಾನದಲ್ಲಿ ಗ್ರಾಮಸ್ಥರು ಭಾಗವಹಿಸುವಂತೆ ತಿಳಿಸಿದರು.
ಭೇಟಿ ತಂಡದಲ್ಲಿ ಯುವ ಮುಖಂಡ ಸುರೇಂದ್ರ ಕೋರ್ಯ, ಅವಿನಾಶ್, ದೇವಪ್ಪ, ಉಮೇಶ್ ಪೂಜಾರಿ, ರಿತೇಶ್, ಸಮಿತ್ ಮತ್ತು ವಿಠಲ ನೂಜಿ ಹಾಜರಿದ್ದರು.

Exit mobile version