ಕೆವಿಜಿ ಸುಳ್ಯ ಹಬ್ಬ ಸಮಾಜಸೇವಾ ಸಂಘ ದ ಆಶ್ರಯದಲ್ಲಿ ಎಲಿಮಲೆ ಯಲ್ಲಿ ನಡೆಯಲಿರುವ ಉಚಿತ ಅರೋಗ್ಯ ಶಿಬಿರದ ಪ್ರಚಾರ ಕ್ಕೆ ಚಾಲನೆ ನೀಡುವ ಕಾರ್ಯ ಇಂದು ನಡೆಯಿತು.
ಎಲಿಮಲೆ ಪ್ರೌಢ ಶಾಲಾ ಮುಖ್ಯಗುರುಗಳಾದ ಸಂದ್ಯಾ ಕುಮಾರ್ ಹಾಗೂ ದೈಹಿಕ ಶಿಕ್ಷಕರಾದ ತಿರುಮಲೆಶ್ವರಿಯವರು ಧ್ವಜವನ್ನು ಸುಳ್ಯ ಕೆವಿಜಿ ಸುಳ್ಯ ಹಬ್ಬದ ಅಧ್ಯಕ್ಷರಾದ ದೊಡ್ಡಣ್ಣ ಬರೆಮೇಲು ಇವರಿಗೆ ಹಸ್ತಾಂತರಿಸುವ ಮೂಲಕ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಶಿಬಿರದ ಸಂಚಾಲಕರದ ಶೈಲೇಶ್ ಅಂಬೆಕಲ್ಲು, ಬಾಲಚಂದ್ರ ಅಂಬೆಕಲ್ಲು, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು