ಜವಳಿ ವ್ಯಾಪಾರಸ್ಥರಿಗೆ ಗುಂಪು ಹಲ್ಲೆ 

0

  ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಎಸ್ ಎಂ ಎ ಬೆಳ್ಳಾರೆ ಝೋನಲ್ ಸಮಿತಿ ವತಿಯಿಂದ ಬೆಳ್ಳಾರೆ ಪೋಲಿಸ್ ಠಾಣಾ ಎಸ್ ಐ ಗೆ ಮನವಿ

ಕಾಣಿಯೂರು ಪರಿಸರದಲ್ಲಿ ವ್ಯಾಪಾರದ ನಿಮಿತ್ತ ಬಂದಿದ್ದಇಬ್ಬರು ಮುಸ್ಲಿಂ ಯುವಕರ ಮೇಲೆ ಗುಂಪು ಹಲ್ಲೆ ನಡೆಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸುನ್ನಿ ಮ್ಯಾನೇಜ್ಮೆಂಟ್ ಅಸೋಸಿಯೇಷನ್ (ಎಸ್ಎಂಎ) ಬೆಳ್ಳಾರೆ ಝೋನಲ್ ವತಿಯಿಂದ ಇಂದು ಬೆಳ್ಳಾರೆ ಪೊಲೀಸ್ ಠಾಣಾ ಉಪನಿರೀಕ್ಷಕರಿಗೆ ಮನವಿ ನೀಡಿದ್ದಾರೆ.
ಮನವಿಯಲ್ಲಿ ಉಲ್ಲೇಖಿಸಿರುವ ಅವರು ಅಕ್ಟೋಬರ್ 20,2022ರಂದು ಕಾಣಿಯೂರು ಪರಿಸರದಲ್ಲಿ ನಮ್ಮ ಸಮುದಾಯದ ಇಬ್ಬರು ಯುವಕರು ವ್ಯಾಪಾರದ ನಿಮಿತ್ತ ಬಂದಿದ್ದು, ಈ ಸಂದರ್ಭದಲ್ಲಿ ಸ್ಥಳೀಯ ಪರಿಸರದ ಕೆಲವು ಹಿಂದೂ ಸಮುದಾಯದ ಯುವಕರು ವ್ಯಾಪಾರಕ್ಕೆ ಬಂದಿದ್ದ ಇಬ್ಬರು ಯುವಕರನ್ನು ಮುಸಲ್ಮಾನರು ಎಂಬ ಒಂದೇ ಉದ್ದೇಶದಿಂದ ಅವರ ಮೇಲೆ ಹಲ್ಲೆ ನಡೆಸಿದ್ದು ಗಂಭೀರ ಗಾಯಗೊಂಡಿರುವ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆದ್ದರಿಂದ ಈ ಘಟನೆಗೆ ಸಂಬಂಧಿಸಿದ ಆರೋಪಿಗಳನ್ನು ಕೂಡಲೇ ಬಂಧಿಸಿ ಸಂತ್ರಸ್ತರಿಗೆ ನ್ಯಾಯ ನೀಡಬೇಕು ಹಾಗೂ ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಝೋನಲ್ ಸಮಿತಿ ಅಧ್ಯಕ್ಷ ಹಾಜಿ ಇಬ್ರಾಹಿಂ ಬೀಡು, ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾ ಅಹಸನಿ ಮಾಡನೂರು, ಕೋಶಾಧಿಕಾರಿ ಹಾಜಿ ಅಬೂಬಕ್ಕರ್ ಕೋಡಿಂಬಳ, ಹನೀಫ್ ಹಾಜಿ ಇಂದ್ರಜೆ, ಇಸ್ಮಾಯಿಲ್ ಪಡಿಪಿನಂಗಡಿ, ಬಿ ಪಿ ಇಸ್ಮಾಯಿಲ್ ಹಾಜಿ ಬೈತಡ್ಕ, ಶಾಫಿ ಚೆನ್ನಾರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here