ನುಸ್ರತುಲ್ ಇಸ್ಲಾಂ ಎಸೋಸಿಯೇಶನ್ ವತಿಯಿಂದ ರೂಬಿ ಜ್ಯುಬಿಲಿ ವರ್ಷ ಆಚರಣೆ ಪ್ರಯುಕ್ತ ಪ್ರವಾದಿ ಮುಹಮ್ಮದ್ ರವರ ಜನ್ಮದಿನದ ಅಂಗವಾಗಿ ಉಚಿತ ಹಣ್ಣಿನ ಗಿಡ ವಿತರಣೆ ಕಾರ್ಯಕ್ರಮ ಎಲಿಮಲೆ ಜುಮಾ ಮಸೀದಿ ವಠಾರದಲ್ಲಿ ಜರಗಿತು.
ಎಲಿಮಲೆ ಜಮಾಅತ್ ಕಮಿಟಿ ಅಧ್ಯಕ್ಷರಾದ ಮಹಮ್ಮದ್ ಇಕ್ಬಾಲ್ ಎಲಿಮಲೆ ,ನುಸ್ರತ್ ಅಧ್ಯಕ್ಷ ಲತೀಫ್ ಹರ್ಲಡ್ಕ ,ಗಿಡಗಳನ್ನು ವಿತರಿಸಿದರು.
ಎಲಿಮಲೆ ಮಸೀದಿ ಮುದರ್ರಿಸ್ ಜೌಹರ್ ಅಹ್ಸನಿ ಯವರು ಜಗತ್ತಿಗೇ ಶಾಂತಿ ದೂತರಾಗಿ ಬಂದ ಪ್ರವಾದಿಯವರ ಜೀವನ ಹಾಗೂ ಗಿಡ ಮರಗಳನ್ನು ಬೆಳೆಸುವ ಮಹತ್ವವನ್ನು ವಿವರಿಸಿದರು.
ಜಮಾಅತ್ ಕಮಿಟಿಯ ಉಪಾಧ್ಯಕ್ಷ ಯೂಸುಫ್ ಪಾಣಾಜೆ, ಕೊಶಾಧಿಕಾರಿ ಮಹಮೂದ್ ಮುಸ್ಲಿಯಾರ್ , ಜೀರ್ಮುಕಿ ಮಸೀದಿ ಅಧ್ಯಕ್ಷ ಸಿದ್ದೀಕ್ ತಟ್ಟುಕಡ, ನುಸ್ರತ್ ಉಪಾಧ್ಯಕ್ಷ ರಾದ ಸೂಫಿ ಮುಸ್ಲಿಯಾರ್, ಅಬ್ದುಲ್ಲ ಜೀರ್ಮುಕಿ, ಪ್ರಧಾನ ಕಾರ್ಯದರ್ಶಿ ಸೂಫಿ ಎಲಿಮಲೆ, ಕಾರ್ಯದರ್ಶಿ ಸಿದ್ದೀಕ್ ಎಲಿಮಲೆ, ಕೋಶಾಧಿಕಾರಿ ಕಾದರ್ ಪಾಣಾಜೆ ಹಾಗೂ ಸದಸ್ಯರು ಮತ್ತು ಜಮಾಅತಿನ ಮುಸ್ಲಿಂ ಭಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಗಿಡಗಳನ್ನು ಕೊಂಡೊಯ್ದು ನೆಡುವ ಮೂಲಕ ಕಾರ್ಯಕ್ರಮಕ್ಕೆ ಸಹಕಾರ ನೀಡಿದರು.