ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಇದರ ಕಾನೂನು ಸಲಹೆಗಾರರಾಗಿ ಸುಳ್ಯದ ನ್ಯಾಯವಾದಿ ದೇವಿಪ್ರಸಾದ್ ಆಳ್ವ ಎಸ್ ಇವರು ನೇಮಕಗೊಂಡಿದ್ದಾರೆ.
ಸುಳ್ಯ ಹಾಗೂ ಬೆಳ್ಳಾರೆಯಲ್ಲಿ ನ್ಯಾಯವಾದಿ ಕಚೇರಿಯನ್ನು ಹೊಂದಿರುವ ದೇವಿಪ್ರಸಾದ್ ಆಳ್ವರು ನೋಟರಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಬ್ಯಾಂಕ್ ಆಫ್ ಬರೋಡ, ಯೂನಿಯನ್ ಬ್ಯಾಂಕ್, ಆದರ್ಶವಿವಿಧೋದ್ದೇಶ ಸಹಕಾರಿ ಸಂಘ, ಮಾತೃಭೂಮಿ ಸೌಹಾರ್ದ ಸಹಕಾರಿ ಸಂಘ, ರೆಪ್ಕೋ ಬ್ಯಾಂಕ್, ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ, ಕನಕಮಜಲು ಮತ್ತು ಬೆಳ್ಳಾರೆ ಸಹಕಾರಿ ಸಂಘ, ಕರ್ನಾಟಕ ರಸ್ತೆ ಸಾರಿಗೆ ನಿಗಮ ಇವುಗಳ ಕಾನೂನು ಸಲಹೆಗಾರರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.