ಮುರುಳ್ಯ : ಕುಣಿತ ಭಜನೆ ಉದ್ಘಾಟನೆ

0

ಮುರುಳ್ಯದ ಶ್ರೀರಾಮಾಂಜನೇಯ ಭಜನಾ ಮಂದಿರದಲ್ಲಿ ಮುರುಳ್ಯ ಪಂಚಾಯತ್ ಸಿಬ್ಬಂದಿಗಳಾದ ರಂಜಿನಿ ಮತ್ತು ಶೈಲಜಾರವರ ತಂಡದ ಕುಣಿತ ಭಜನೆಯ ಉದ್ಘಾಟನಾ ಕಾರ್ಯಕ್ರಮ ಸೆಪ್ಟೆಂಬರ್ 11 ರಂದು ನಡೆಯಿತು.


ಶ್ರೀ ರಾಮಾಂಜನೇಯ ಭಜನಾ ಮಂದಿರದ ಅಧ್ಯಕ್ಷ ವಸಂತ ಹುದೇರಿರವರು ಉದ್ಘಾಟಿಸಿದರು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಭಾಗೀರಥಿ ಮುರುಳ್ಯ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕು. ಜಾನಕಿ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಮೋನಪ್ಪ ಗೌಡ ಅಲೇಕಿ ಮೊದಲಾದವರು ಅತಿಥಿಗಳಾಗಿದ್ದರು.

ಗಣಪತಿ ಸ್ತುತಿಯೊಂದಿಗೆ ಪ್ರಾರ್ಥಿಸಿದರು ಕುಣಿತ ಭಜನೆ ಗುರುಗಳಾಗಿದ್ದ ಶಶಿಧರ ಎಣ್ಮೂರುರವರು ಮಕ್ಕಳಿಗೆ ಮತ್ತು ಮಹಿಳೆಯರಿಗೆ ಕುಣಿತ ಭಜನೆ ಪ್ರಾರಂಭಿಸಿದರು . ರಂಜಿನಿ ಪ್ರಾರ್ಥಿಸಿದರು.

LEAVE A REPLY

Please enter your comment!
Please enter your name here