ಮಚ್ಚಿನ: ಮಂಗಳೂರು ಅತ್ತಾವರ ಸರಕಾರಿ ಪ್ರೌಢಶಾಲೆ ಇದರ ನೇತೃತ್ವದಲ್ಲಿ ಮಂಗಳ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ಸರಕಾರಿ ಪ್ರೌಢಶಾಲೆ ಮಚ್ಚಿನ ಇಲ್ಲಿಯ ವಿದ್ಯಾರ್ಥಿಗಳು ಅದ್ಭುತ ಸಾಧನೆ ಮಾಡಿದ್ದಾರೆ.
ಪುನಿತ್ ಕುಮಾರ್ 3000 ಮೀ ಓಟದಲ್ಲಿ ಪ್ರಥಮ , ಧನ್ಯಾ 3000 ಮೀ. ಓಟದಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಅಖಿಲೇಶ್ 5 ಕಿ.ಮೀ. ನಡಿಗೆಯಲ್ಲಿ ತೃತೀಯ ಸ್ಥಾನ ಹಾಗೂ ಸುಹೈಲ್ ಅಹಮ್ಮದ್ ಜಾವಲಿನ್ ಎಸೆತದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.
ಇವರು ಶಾಲೆಗೆ ಮತ್ತು ಹೆತ್ತವರಿಗೆ ಕೀರ್ತಿಯನ್ನು ತಂದಿದ್ದಾರೆ.
ಇವರಿಗೆ ಶಿಕ್ಷಕರಾದ ಸುಭಾಶ್ಚಂದ್ರ ಪೂಜಾರಿ ಮತ್ತು ಸಹ ಶಿಕ್ಷಕವೃಂದದವರು ತರಬೇತಿಗೊಳಿಸಿದ್ದರು.