ನ್ಯಾಯತರ್ಪು: ನ್ಯಾಯತರ್ಪು ಇಲ್ಲಿಯ ಉಪಕೇಂದ್ರ ಉದ್ಘಾಟನೆಯು ಅ.13ರಂದು ಪಂಚಾಯತ್ ಅಧ್ಯಕ್ಷೆ ಶುಭಾಷಿಣಿಯವರ ಅಧ್ಯಕ್ಷತೆಯಲ್ಲಿ ಉದ್ಘಾಟನೆಗೊಂಡಿತು.
ಕಾರ್ಯಕ್ರಮದಲ್ಲಿ ಕಳಿಯ ಗ್ರಾ.ಪಂ ಸದಸ್ಯರು ವಿಜಯಕುಮಾರ್, ಮೋಹಿನಿ ಬೊಮ್ಮಣ್ಣ ಗೌಡ , ಕಳಿಯ ಗ್ರಾ. ಪಂ.ಅಭಿವೃದ್ಧಿ ಅಧಿಕಾರಿಗಳಾದ ಸಂತೋಷ್ ಪಾಟೀಲ್, ಬೆಳ್ತಂಗಡಿ ವಾಣಿ ಪ್ರೌಢ ಶಾಲಾ ಮುಖ್ಯೋಪಾಧ್ಯಾಯರು ಲಕ್ಷ್ಮೀ ನಾರಾಯಣ, ನಾಳ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಉಮೇಶ್ ಕೇಲ್ದಡ್ಕ, ನ್ಯಾಯತರ್ಪು ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ವಸಂತ್ ಕುಮಾರ್, ಸೈನಿಕ ವಿಕ್ರಂ ಜೆ.ಎನ್, ರಕ್ತೇಶ್ವರಿ ಪದವು ನೇತಾಜಿ ಕ್ರೀಡಾ ಸಂಘದ ಅಧ್ಯಕ್ಷರು ಸಿದ್ದಪ್ಪ ಗೌಡ, ನ್ಯಾಯತರ್ಪು ಸೇವಾ ಪ್ರತಿನಿಧಿ ವಿನೋದ್ ಮತ್ತು ಕಣಿಯೂರು ವಲಯದ ಸಮುದಾಯ ಆರೋಗ್ಯ ಅಧಿಕಾರಿಗಳು, ನ್ಯಾಯತರ್ಪು ಗ್ರಾಮದ ಸಮುದಾಯ ಅಧಿಕಾರಿಗಳಾದ ವೆಂಕಟೇಶ್ ಮತ್ತು ಆಶಾಕಾರ್ಯಕರ್ತರಾದ ಪೂರ್ಣಿಮಾ, ಶಶಿಕಲಾ ಹಾಗೂ ಊರ ಗಣ್ಯರು ಭಾಗಿಯಾಗಿದ್ದರು.