ಬೆಳ್ತಂಗಡಿ: ಈ ದೇಶದಲ್ಲಿ ಅನೇಕ ದೇವಸ್ಥಾನಗಳು ಹಿಂದೂ ಭಕ್ತರ ಕೈಯಲ್ಲಿದೆ. ದೇವಸ್ಥಾನಗಳ ನಿಧಿಯ ಉಪಯೋಗ, ದೇವಸ್ಥಾನದ ಕಾರ್ಯನಿರ್ವಹಣೆ, ದೇವಸ್ಥಾನದ ಪೂಜಾ ಕೈಂಕರ್ಯ ಹಾಗೂ ದೇವಸ್ಥಾನಗಳಿಂದ ಮಾಡಬೇಕಾದ ಧರ್ಮಕಾರ್ಯಗಳ ಬಗ್ಗೆ ರಾಷ್ಟ್ರಾದ್ಯಂತ ದೇವಾಲಯಗಳ ಪರಿಷತ್ ಮಾಡುವ ಉದ್ದೇಶದಿಂದ ದೇವಸ್ಥಾನಗಳ ಮುಖ್ಯಸ್ಥರಿಗಾಗಿ ಶಿಬಿರಗಳ ಆಯೋಜನೆ ಗಳನ್ನು ಮಾಡಲಾಗುತ್ತದೆ. ಈ ನಿಮಿತ್ತ ಇದರ ಚಾಲನೆಯನ್ನು ನೀಡಲು ಮತ್ತು ಮಾರ್ಗದರ್ಶನವನ್ನು ಪಡಿಯಲು ರಾಜ್ಯ ಸಭಾ ಸದಸ್ಯರು ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ||ಡಿ ವೀರೇಂದ್ರ ಹೆಗ್ಗಡೆಯವರನ್ನು ಸನಾತನ ಸಂಸ್ಥೆಯ ವಕ್ತಾರರಾದ ಚೇತನ ರಾಜಹಂಸ ಇವರು ಭೇಟಿ ಮಾಡಿದರು.
ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರರಾದ ಗುರುಪ್ರಸಾದ್ ಗೌಡ, ಹಿಂದೂ ಜನಜಾಗೃತಿ ಸಮಿತಿಯ ಜಿಲ್ಲಾ ಸಮನ್ವಯರಾದಂತಹ ಚಂದ್ರ ಮೊಗೇರ, ಸನಾತನ ಸಂಸ್ಥೆಯ ದಕ್ಷಿಣ ಕನ್ನಡ ಜಿಲ್ಲೆಗಳ ಧರ್ಮ ಪ್ರಸಾರಕರಾದಂತಹ ಮಂಜುಳ ಗೌಡ ಹಾಗೂ ಇತರ ಸಾಧಕರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವೀರೇಂದ್ರ ಹೆಗ್ಗಡೆಯವರು, ಧರ್ಮಸ್ಥಳ ಕ್ಷೇತ್ರದ ಟ್ರಸ್ಟಿನ ಮುಖಾಂತರ ಮುದ್ರಣಗೊಂಡ ಕಿರು ಪುಸ್ತಕವನ್ನು ತೋರಿಸಿ ಅವರು ಮಾಡಿದ ಕಾರ್ಯದ ಬಗ್ಗೆ ವಿಶ್ಲೇಷಣೆಯನ್ನು ನೀಡಿದರು, ಹಾಗೂ ನೀವು ಮಾಡುವ ಮಂದಿರ ಪರಿಷತ್ ಕಾರ್ಯಕ್ಕೆ ನನ್ನ ಸಂಪೂರ್ಣ ಸಹಕಾರವಿದೆ ಎಂದು ಹೇಳುತ್ತ ಆಶೀರ್ವಾದವನ್ನು ನೀಡಿದರು.