ಬೆಳ್ತಂಗಡಿ: ವಿಜಯ ರತ್ನ 2022 ಪ್ರಶಸ್ತಿ ಪುರಸ್ಕೃತರಾದ ಉಜಿರೆ ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ, ಸಮಾಜ ಸೇವಕ, ಲಕ್ಷ್ಮೀ ಗ್ರೂಪ್ನ ಮಾಲಕ ಮೋಹನ್ ಕುಮಾರ್ ಅವರನ್ನು ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜೆಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ಪ್ರಸಾದ್ ಬಿ.ಎಸ್, ಪೂರ್ವಾಧ್ಯಕ್ಷರಾದ ಚಿದಾನಂದ ಇಡ್ಯ ಬೆಳ್ತಂಗಡಿ, ಸಂತೋಷ್ ಪಿ ಕೋಟ್ಯಾನ್ ಬಳಂಜ,ಪದಾಧಿಕಾರಿಗಳಾದ ಸುಶೀಲ್ ಕುಮಾರ್ ಉಜಿರೆ, ಹೇಮಾವತಿ ಬೆಳ್ತಂಗಡಿ,ಸುನೀತಾ ಬೈಜು ಉಜಿರೆ, ಚಂದ್ರಹಾಸ ಬಳಂಜ,ವಿಜಯ್ ನಿಡಿಗಲ್, ಚಿದಾನಂದ ಬೆಳ್ತಂಗಡಿ, ಜಗದೀಶ್ ಬಳಂಜ,ಉದಯ ಬಂಗೇರ ನಾವೂರು,ಜಿತೇಶ್ ಕುಮಾರ್ ಬೆಳ್ತಂಗಡಿ,ಜಯರಾಜ್ ನಡಕ್ಕರ ಹಾಗೂ ಇತರರು ಉಪಸ್ಥಿತರಿದ್ದರು.