






ಧರ್ಮಸ್ಥಳ: ಬೆಳ್ತಂಗಡಿ ಭಾರತ ಸ್ಕೌಟ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಅವರು ನಡೆಸಿದ ದ್ವಿತೀಯ ಚರಣ ಕಬ್ ವಿಭಾಗದ 17 ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದಾರೆ. ಶಾಲಾ ಮುಖ್ಯ ಶಿಕ್ಷಕಿ ಪರಿಮಳ ಎಂ.ವಿ. ಅವರ ಮಾರ್ಗದರ್ಶನದೊಂದಿಗೆ ಶಾಲಾ ಕಬ್ ಮಾಸ್ಟರ್ ಲೀಡರ್ ಅಮೃತಾ ವಿ. ಶೆಟ್ಟಿ, ಹೇಮಾವತಿ ಜೈನ್ ಹಾಗೂ ಕಾದಂಬರಿ ಸಂದೀಪ್ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿರುತ್ತಾರೆ.









