ಶಿಬಾಜೆ: ಮೊಂಟೆತ್ತಡ್ಕ ದುರ್ಗಾಪರಮೇಶ್ವರಿ ದೇವಸ್ಥಾನದ ಒಳಾಂಗಣ ಮತ್ತು ರಾಜಾಂಗಣದ ಮೇಲ್ಛಾವಣಿ ನಿರ್ಮಾಣಕ್ಕೆ ಸುಬ್ರಮಣ್ಯ ಶಬರಾಯರಿಂದ ಶಿಲಾನ್ಯಾಸ

0

ಶಿಬಾಜೆ: ಜೂ. 13ರಂದು ಮೊಂಟೆತ್ತಡ್ಕ ದುರ್ಗಾಪರಮೇಶ್ವರಿ ದೇವಸ್ಥಾನದ ಒಳಾoಗಣ ಮತ್ತು ರಾಜಾಂಗಣದ ಮೇಲ್ಛಾವಣಿ ನಿರ್ಮಾಣ ಕೆಲಸಕ್ಕೆ ಸೌತಡ್ಕ ಶ್ರೀ ಮಹಾಗಣಪತಿ ದೇವಳದ ಅಧ್ಯಕ್ಷ ಸುಬ್ರಮಣ್ಯ ಶಬರಾಯರು ಶಿಲಾನ್ಯಾಸ ನೆರವೇರಿಸಿದರು.

ಬೆಳಿಗ್ಗೆ ಗಂಟೆ 7.30ಕ್ಕೆ ಗಣಹೋಮ ಆರಂಭಗೊಂಡು 10ಗಂಟೆಗೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು. ದೇವಳದ ಅಧ್ಯಕ್ಷ ಶ್ರೀಧರ್ ರಾವ್ ಅಜಿರಡ್ಕ, ಸದಸ್ಯರಾದ ಸುಂದರ ಮಲೆಕುಡಿಯ, ಶೋಭಾ ಅಭ್ಯಂಕರ್, ಶೀಲಾ, ಬಾಲಚಂದ್ರ ಶೆಟ್ಟಿಗಾರ್, ವಸಂತ ಕೆ., ಸತೀಶ್, ಗಂಗಾಧರ ಗೌಡ, ಅರ್ಚಕ ಶ್ರೀಧರ್ ಉಪಾಧ್ಯಯ, ಅಮ್ಮಾಜೆ ದೇವಸ್ಥಾನದ ಆಡಳಿತ ಮೊಕ್ತೇಸರ ಸುಧಾಕರ ಗೌಡ ಬಾಗಿಲುಗದ್ದೆ, ಕಾಲಕಾಮ ಪರಶುರಾಮ ದೇವಸ್ಥಾನ ದರ್ಬೆತಡ್ಕ ಆಡಳಿತ ಮೊಕ್ತೇಸರ ಉದಯ ಕುಮಾರ್ ಅಭ್ಯಂಕರ್, ಕಳೆಂಜ ಸದಾಶಿವೇಶ್ವರ ದೇವಸ್ಥಾನದ ಅಧ್ಯಕ್ಷ ಶ್ರೀಧರ ರಾವ್ ಕಾಯಡ, ವಾಮನ ತಾಮ್ಹಣ್ಕರ್ ಅರಸಿನಮಕ್ಕಿ, ಸಿ.ಎ. ಬ್ಯಾಂಕ್ ನಿರ್ದೇಶಕ ಧರ್ಮರಾಜ ಅಡ್ಕಾರಿ, ಊರಿನ ಪ್ರಮುಖರಾದ ಚೆನ್ನಪ್ಪ ಗೌಡ, ವಿಶ್ವನಾಥ್ ಗುಂಡ್ಯ, ಗಣೇಶ್ ಗೋಖಲೆ, ಯೋಗೀಶ್ ಗೌಡ, ದೇವಳದ ಸಿಬ್ಬಂದಿಗಳಾದ ಶಕುಂತಲಾ, ಹರೀಶ್, ಎಂಜಿನಿಯರ್ ಶಿವಣ್ಣ, ಉಪಸ್ಥಿತರಿದ್ದರು. ವಾಸ್ತು ಶಿಲ್ಪಿ ರಮೇಶ್ ಕಾರಂತ್ ಕಾಸರಗೋಡು ಇವರ ಸಲಹೆ ಮೇರೆಗೆ ಮುಂದಿನ ಕೆಲಸ ಕಾರ್ಯಗಳು ನಡೆಯಲಿದೆ ಎಂದು ದೇವಳದ ಅಧ್ಯಕ್ಷ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here