ಶ್ರೀರಾಮ ಸೊಸೈಟಿಯ ಪಂಗನಾಮ ಕೇಸ್: ಆಸ್ತಿ ಜಪ್ತಿಗೆ ನ್ಯಾಯಾಲಯದಿಂದ ಮಹತ್ವದ ಆದೇಶ

0

ಬೆಳ್ತಂಗಡಿ: ಶ್ರೀರಾಮ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಸಂಸ್ಥೆ ಕೋಟಿಗಟ್ಟಣೆ ಹಣಕಾಸು ಅವ್ಯವಹಾರ ನಡೆಸಿ, ಗ್ರಾಹಕರಿಗೆ ವಂಚಿಸಿದ ಆರೋಪದ ಹಿನ್ನೆಲೆಯಲ್ಲಿ ಸೊಸೈಟಿಯ ಅಧ್ಯಕ್ಷ, ನಿರ್ದೇಶಕರು ಸೇರಿದಂತೆ ಕೆಲ ಸಿಬ್ಬಂದಿಯ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ದ.ಕ. ಜಿಲ್ಲೆಯ ಸಹಕಾರ ಸಂಘಗಳ ಉಪನಿಬಂಧಕರ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ.

ಈ ಸಂಘದ 2023-24ನೇ ಸಾಲಿನ ಲೆಕ್ಕಪರಿಶೋಧನೆಯನ್ನು ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959ರ ಕಲಂ 63ರಡಿ ಬೆಂಗಳೂರಿನ ತುಕಾರಾಮ್ ಎಂಬವರು ಮಾಡಿ, ವರದಿಯನ್ನು ಸಲ್ಲಿಸಿದ್ದರು. ಲೆಕ್ಕಪರಿಶೋಧನೆಯಲ್ಲಿ ವ್ಯವಹಾರದಲ್ಲಿನ ನ್ಯೂನತೆಗಳು ಕಂಡುಬಂದಿದು, ಸಂಘದಲ್ಲಿ ರೂ. 30,45,278ಮೊತ್ತದಷ್ಟು ಹಣದ ದುರುಪಯೋಗ ನಡೆದಿದ್ದು, ಇದನ್ನು ವಸೂಲು ಮಾಡಬೇಕು ಎಂದು ಶಿಫಾರಸು ಮಾಡಿದ್ದರು. ಇದನ್ನು ಪರಿಗಣಿಸಿರುವ ನ್ಯಾಯಾಲಯ ಸೊಸೈಟಿ ಅಧ್ಯಕ್ಷ ಪ್ರಭಾಕರ ಸಿಎಚ್, ನಿರ್ದೇಶಕರಾದ ವಿಶ್ವನಾಥ ನಾಯಕ್, ವಿಶ್ವನಾಥ, ಪ್ರಮೋದ್ ಆರ್ ನಾಯಕ್, ಪಿ. ಜಗನ್ನಾಥ್, ರತ್ನಾಕರ ಶೇರಿಗಾರ್, ನಯನ ಶಿವಪ್ರಸಾದ್, ಮುಖ್ಯ, ಕಾರ್ಯನಿರ್ವಹಣಾಧಿಕಾರಿ ಬಿ. ಚಂದ್ರಕಾಂತ್, ಸಿಬ್ಬಂದಿ ಸರಿತಾ ಎಸ್ ಅವರ ಆಸ್ತಿಗಳನ್ನು ಜಪ್ತಿ ಮಾಡುವಂತೆ ಆದೇಶ ಮಾಡಿದೆ.

ಈ ಆದೇಶ ಕಡೆಗಣಿಸಿ ಮೇಲ್ಕಂಡ ವ್ಯಕ್ತಿಗಳ ಸದರಿ ಆಸ್ತಿಗಳನ್ನು ಯಾರಾದರೂ ಖರೀದಿಸಿದರೆ, ಮುಂದಿನ ಪರಿಣಾಮಗಳಿಗೆ ಅವರೇ ಜವಾಬ್ದಾರರಾಗಿರುತ್ತಾರೆ ಎಂದು ನ್ಯಾಯಾಲಯ ಎಚ್ಚರಿಸಿದೆ.

LEAVE A REPLY

Please enter your comment!
Please enter your name here