ಬೆಳ್ತಂಗಡಿ ಧರ್ಮಪ್ರಾಂತ್ಯದ ಪ್ರಾಂತೀಯ ಪಾಲನಾ ಸಮಿತಿಯ ವಾರ್ಷಿಕ ಮಹಾಸಭೆ

0

ಬೆಳ್ತಂಗಡಿ: ಧರ್ಮಪ್ರಾಂತ್ಯದ ಪ್ರಾಂತೀಯ ಪಾಲನಾ ಸಮಿತಿಯ ವಾರ್ಷಿಕ ಮಹಾಸಭೆಯು ನಡೆಸಲಾಯಿತು. ವಿವಿಧ ಧರ್ಮಕೇಂದ್ರಗಳಿಂದ 82 ಪ್ರತಿನಿಧಿಗಳು ಬಾಗವಹಿಸುವ ಸಮ್ಮೇಳನದಲ್ಲಿ ಲಾರೆನ್ಸ್ ಮುಕ್ಕುಯಿಯವರು ಅಧ್ಯಕ್ಷರಾಗಿದ್ದರು. ಫಾ. ಜೋಸ್ರವರು “ದೇವರಲ್ಲಿನ ಪ್ರೀತಿ ಮತ್ತು ಭರವಸೆಯು ನಮ್ಮೆಲ್ಲರನ್ನೂ ಒಗ್ಗೂಡಿಸಲು ಕಾರಣವಾಗಲಿ” ಹಾರೈಸಿ ಎಲ್ಲರನ್ನು ಸ್ವಾಗತಿಸಿದರು.

ಜೆಸಿಂತಾರವರು ವಾರ್ಷಿಕ ವರದಿಯನ್ನು ಮಂಡಿಸಿದರು. ಧರ್ಮಪ್ರಾಂತ್ಯದ ಚಾನ್ಸೆಲರ್ ಫಾ. ಲಾರೆನ್ಸ್ ಪೂನೂಲಿಲ್ ರವರು ಹಿಂದಿನ ವರ್ಷದ ವೃತ್ತಾನ್ಥಗಳನ್ನು ಓದಿ ಪ್ರಸ್ತುತಪಡಿಸಿದರು. ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಲಾರೆನ್ಸ್ ಧರ್ಮಪ್ರಾಂತ್ಯದ ಬೆಳವಣಿಗೆಯಲ್ಲಿ ಸಂತಸ ವ್ಯಕ್ತಪಡಿಸಿ ಎಲ್ಲರನ್ನು ಅಭಿನಂದಿಸಿದರು. ಧರ್ಮಪ್ರಾಂತ್ಯದ ಬೆಳವಣಿಗೆಯಲ್ಲಿ ಇನ್ನಷ್ಟು ಉತ್ಸುಕರಾಗಿ ಸಮಾಜದ ಸೇವೆಯಲ್ಲಿ ಕ್ರೈಸ್ತರು ತಮ್ಮನ್ನು ತೊಡಗಿಸಬೇಕು ಎಂದು ಸೂಚಿಸಿದರು.

LEAVE A REPLY

Please enter your comment!
Please enter your name here