ಆನೆ ದಾಳಿ: ಚಾಲಕ ದಿನೇಶ್ ಗೆ ಕಿರಣ್ ಚಂದ್ರ ಪುಷ್ಪಗಿರಿ ನೆರವು

0

ಧರ್ಮಸ್ಥಳ: ಬೊಳಿಯಾರ್ ನಲ್ಲಿ ಕಾಡಾನೆಯೊಂದು ದಾಳಿ ಮಾಡಿದ ಹಿನ್ನಲೆಯಲ್ಲಿ ದಿನೇಶ್ ಎಂಬವರಿಗೆ ಸೇರಿದ ಕೆಎ 70 3271 ನಂಬರಿನ ಆಟೋ ಸಂಪೂರ್ಣ ಜಖಂಗೊಂಡಿದೆ. ಕಾಡಾನೆ ಏಕಾಏಕಿ ದಾಳಿ ಮಾಡಿದ್ದು, ಚಾಲಕ ರಿಕ್ಷಾ ಬಿಟ್ಟು ಓಡಿ ತಪ್ಪಿಸಿಕೊಂಡಿದ್ದಾರೆ. ಆನೆ ಆಟೋವನ್ನು ಎತ್ತಿ ಬಿಸಾಕಿದೆ. ಅದೃಷ್ಟವಶಾತ್ ಚಾಲಕನಿಗೆ ಗಾಯಗಳಾಗಿಲ್ಲ. ಆಟೋ ಚಾಲಕ ದಿನೇಶ್ ಧರ್ಮಸ್ಥಳದ ಕಲ್ಲೇರಿಯಲ್ಲಿ ಬಾಡಿಗೆ ಮಾಡಿಕೊಂಡು ಜೀವನ ಮಾಡುತ್ತಿದ್ದರು. ಜೂ.7ರಂದು ಇವರ ಮನೆಗೆ ಕಿರಣ್ ಚಂದ್ರ ಪುಷ್ಪಗಿರಿ ಭೇಟಿ ನೀಡಿ ಕುಶಲೋಪರಿ ವಿಚಾರಿಸಿ ಆರ್ಥಿಕ ಸಹಾಯ ಮಾಡಿದರು.

LEAVE A REPLY

Please enter your comment!
Please enter your name here